ಬೆಳ್ತಂಗಡಿ : ಕೆಲ ದಿನಗಳ ಹಿಂದೆ ಮತಾಂಧರು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಗೋಶಾಲೆಯಿಂದ ಗೋವುಗಳನ್ನು ಕದ್ದೊಯ್ದಿರುವುದನ್ನು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಬೆಳ್ತಂಗಡಿ ಪ್ರಖಂಡ ತೀವ್ರವಾಗಿ ಖಂಡಿಸಿದೆ ಮಾತ್ರವಲ್ಲದೆ ಇಂತಹ ಕೃತ್ಯಗಳ ಬಗ್ಗೆ ಸಂಘಟನೆಯು ಯಾವ ನಿಲುವನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವ್ಯಾಪಕ ಚಿಂತನೆ ನಡೆಯುತ್ತಿದೆ ಎಂದು ವಿಹಿಂಪದ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಟಿ.ರಾಧಾಕೃಷ್ಣ ಭಟ್ ತಿಳಿಸಿದರು.
ಅವರು ಮಂಗಳವಾರ ಇಲ್ಲಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಮೇ 30 ರಂದು ದೇಗುಲದಿಂದ ತಲವಾರು ಹಿಡಿದು, ಕಾವಲುಗಾರನನ್ನು ಬೆದರಿಸಿ ಬಲಾತ್ಕಾರವಾಗಿ ಟಾಟಾ ಸುಮೋ ವಾಹನದಲ್ಲಿ 2 ಗೋವುಗಳನ್ನು ಕದ್ದೊಯ್ದಿದ್ದಾರೆ. ಗೋವಿನ ರಕ್ಷಣೆ ಸರ್ವಜನಾಂಗದ ಕರ್ತವ್ಯವೂ ಹೌದು. ಗೋವನ್ನು ಹಿಂದುಗಳು ಆಧ್ಯಾತ್ಮ ದೃಷ್ಟಿಯಿಂದ ಅರಿತು ಪೂಜಿಸಿದರೆ, ಹಿಂದುವೇತರರು ಪರೋಪಕಾರಿ ಎಂದು ಗೌರವಿಸುತ್ತಾರೆ. ವಿಪರ್ಯಾಸವೆಂದರೆ ಹಿಂದುಗಳು ಪೂಜಿಸುತ್ತಾರೆ ಎಂಬ ನೆಪದಿಂದ ಮುಖ್ಯವಾಗಿ ಮುಸಲ್ಮಾನರು ಅದನ್ನು ವಧೆ ಮಾಡುತ್ತಾರೆ ಇದು ಧರ್ಮಾಂಧತೆ ಎಂದರು.
ಸಮಸ್ತ ಮಾನವ ಕೋಟಿಗೆ ಜೀವನಾಡಿಯಂತಿರುವ ಗೋವನ್ನು ಜಾತ್ಯಾತೀತ ಸರ್ಕಾರಗಳು ಅಲ್ಪಸಂಖ್ಯಾತ ಮುಸಲ್ಮಾನರ ಮತ ಬ್ಯಾಂಕಿನ ಆಸೆಯಿಂದ ಗೋಹತ್ಯಾ ನಿಷೇಧ ಕಾನೂನಿಗೆ ಬೆಂಬಲ ನೀಡುತ್ತಿಲ್ಲ. ಅಧಿಕಾರದ ಆಸೆಗಾಗಿ ಜೀವನಾಡಿಯನ್ನೇ ಕತ್ತರಿಸಲೂ ರಾಜಕೀಯ ಪಕ್ಷಗಳು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ. ಬಹುಸಂಖ್ಯಾತರ ಭಾವನೆಗೆ ಸ್ಪಂದಿಸದೇ ಸರಕಾರಗಳು ಸರ್ವಜನಾಂಗಕ್ಕೂ ದ್ರೋಹ ಮಾಡುತ್ತಿರುವುದು ವಿಪರ್ಯಾಸ ಹಾಗೂ ನಾಚಿಕೆಗೇಡು. ಇಂತಹ ರಾಜಕೀಯ ಪಕ್ಷಗಳಿಗೆ ಧಿಕ್ಕಾರ ಎಂದರು.
ಸರಕಾರದಿಂದ ಸಾಧ್ಯವಾಗದನ್ನು ಹಿಂದುಗಳು ಮಾಡುತ್ತಿದ್ದಾರೆ. ಗೋಶಾಲೆಗಳ ಮೂಲಕ ಪೂಜನೀಯ ಭಾವದಿಂದ ಗೋರಕ್ಷಣೆ ಮಾಡಿ ಅರ್ಜಿಸಿದ ಗೋ ಉತ್ಪನ್ನಗಳನ್ನು ಮುಸಲ್ಮಾನರೂ ಉಪಯೋಗಿಸುತ್ತಾರೆ. ಆದರೆ ಗೋವುಗಳನ್ನು ಕದ್ದು, ವಧಿಸಿ ಅದರ ಮಾಂಸವನ್ನು ಆಹಾರಕ್ಕಾಗಿ ಉಪಯೋಗಿಸಿ ಹಿಂದುಗಳ ಭಾವನೆಗೆ ಘಾಸಿ ಉಂಟುಮಾಡುತ್ತಿರುವುದು ಖಂಡನೀಯ. ಭಗವಂತನ ಕ್ಷೇತ್ರಕ್ಕೊಳಪಟ್ಟ ಸೌತೆಡ್ಕ ಗೋಶಾಲೆಯಿಂದ ತಲವಾರು ಹಿಡಿದು ರಾತ್ರಿಹೊತ್ತು ಬೆದರಿಸಿ ಕದ್ದು ಒಯ್ಯುವ ರಾಕ್ಷಸೀ ಕೃತ್ಯ ಮುಸಲ್ಮಾನರದ್ದೇ ಎಂಬುದು ನಗ್ನ ಸತ್ಯ. ಸುಮ್ಮನಿದ್ದರೆ ಮನೆಯ ಹೆಂಗಸರನ್ನು ಇಂತಹವರು ಬಿಟ್ಟಾರೆಯೇ ? ಅದಕ್ಕಾಗಿ ವಿಹಿಂಪ ಗಂಭೀರ ಚಿಂತನೆ ನಡೆಸಿದೆ ಎಂದರು.
ಸರಕಾರ ಗೋಹತ್ಯೆ ನಿಷೇಧ ಕಾನೂನು ತರೋದಿಲ್ಲ. ಪೋಲಿಸ್ ಇಲಾಖೆಯ ವೈಫಲ್ಯತೆ ಜನಜನಿತ. ದೂರು ನೀಡಿದರೂ ತನಿಖೆಯ ನಾಟಕ ಮಾತ್ರ ಮಾಡುತ್ತದೆ. ಸಂಘಟನೆಗಾಗಿ ಕಾರ್ಯಾಚರಣೆ ಮಾಡಿದರೆ ಕೋಮು ಹಣೆಪಟ್ಟಿ ಬೇರೆ. ಇದೆಲ್ಲವನ್ನೂ ಲೆಕ್ಕಿಸದೆ ಗೋರಕ್ಷಣೆ ಮೂಲಕ ಮಾನವ ಕೋಟಿಗೆ ಒಳಿತಾಗಲಿ ಎಂಬ ದೃಷ್ಟಿಯಿಂದ ಗೋಕಳ್ಳ ಮುಸಲ್ಮಾನರಿಗೆ ಸೂಕ್ತ ಸವಾಲು ನೀಡಲು ಬಜರಂಗದಳ ನಿರ್ಧರಿಸಿದೆ. ಸರ್ಕಾರ, ಪೋಲಿಸ್ ಇಲಾಖೆ ಮಾಡದ ಒಳ್ಳೆಯ ಕೆಲಸವನ್ನು ಮಾಡುವ ಸಂಕಲ್ಪ ಮಾಡಿದೆ. ಮೊದಲ ಹಂತದಲ್ಲಿ ನಿಯಮದಂತೆ ಮನವಿ, ಮುಂದಕ್ಕೆ ಹೋರಾಟ ಅನಿವಾರ್ಯ ಎಂಬುದಾಗಿ ನಿರ್ಣಯಿಸಿದೆ ಎಂದರು.
ಇನ್ನೂ ಕಾಲ ಮಿಂಚಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಪೋಲಿಸರು ಜಾಗೃತರಾಗಬೇಕು. ತಟಸ್ಥ ನೀತಿ ಅನುಸರಿಸಿದರೆ ಮುಂದೆ ಆಗಬಹುದಾದ ಅನಾಹುತಕ್ಕೆ ಸರ್ಕಾರ ಹಾಗೂ ಪೋಲಿಸರು ನೇರ ಜವಾಬ್ದಾರಿಯಾಗುತ್ತಾರೆ ಎಂದು ಉಭಯ ಸಂಘಟನೆಗಳು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಈ ಮೂಲಕ ಮನವಿ ಮಾಡಿ ಎಚ್ಚರಿಕೆ ಗಂಟೆಯನ್ನು ಬಾರಿಸುತ್ತದೆ ಎಂದರು.
ಗೋಷ್ಠಿಯಲ್ಲಿ ಬಜರಂಗ ದಳ ಜಿಲ್ಲಾ ಸಂಯೋಜಕ ಭಾಸ್ಕರ ಧರ್ಮಸ್ಥಳ, ತಾಲೂಕು ಸಹ ಸಂಚಾಲಕ ರಮೇಶ್ ಪೂಜಾರಿ, ಬೆಳ್ತಂಗಡಿ ಪ್ರಖಂಡ ಗೋರಕ್ಷಾ ಪ್ರಮುಖ್ ಶ್ರೀನಿವಾಸ್ ಕುಲಾಲ್, ವಿ.ಹಿ.ಪಂ. ತಾಲೂಕು ಕಾರ್ಯದರ್ಶಿ ನವೀನ್ ಕುಮಾರ್ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.