ಬೆಂಗಳೂರು : ರಾಜ್ಯದ ವಿವಿಧೆಡೆ ನಡೆದ ಒಟ್ಟು 175 ಕೋಮು ಗಲಭೆ ಪ್ರಕರಣಗಳನ್ನು ಮತ್ತು ಅದರಲ್ಲಿ ಆರೋಪಿಗಳಾಗಿರುವ ಕೆಎಫ್ಡಿ ಹಾಗೂ ಪಿಎಫ್ಐ ಸಂಘಟನೆ ಕಾರ್ಯಕರ್ತರೂ ಸೇರಿದಂತೆ ಒಟ್ಟು 1600ಮಂದಿಯ ವಿರುದ್ಧ ಪ್ರಕರಣಗಳನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸರ್ಕಾರದ ಈ ನಿರ್ಧಾರವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ ಜಯಚಂದ್ರ ಘೋಷಿಸಿದ್ದಾರೆ.
ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿ.ಬಿ. ಜಯಚಂದ್ರ ‘ರಾಜ್ಯದಲ್ಲಿ ನಡೆದ ಒಟ್ಟು 175 ಕೋಮುಗಲಭೆ ಪ್ರಕರಣಗಳನ್ನು ಮತ್ತು 1600 ಆರೊಪಿಗಳ ವಿರುದ್ಧದ ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಿದ್ದೇವೆ. ಕೋಮು ಗಲಭೆ ಸಂದರ್ಭದಲ್ಲಿ ಗಲಭೆ ಮಾಡುವವರು ಯಾರೋ ಆದರೆ ಸಿಕ್ಕಿ ಬೀಳುವವರು ಅಮಾಯಕರು. ಹೆಚ್ಚಿನ ಪ್ರಕರಣದಲ್ಲಿ ಸಾಕ್ಷಿಗಳ ಕೊರತೆಯಿಂದ ಪ್ರಕರಣ ಬಿದ್ದುಹೋಗುತ್ತದೆ. ಕೆಲವೊಮ್ಮೆ ಆರೋಪಿಗಳು ಅನಗತ್ಯವಾಗಿ ಕೋರ್ಟ್ಗೆ ಅಲೆದಾಟ ನಡೆಸಬೇಕು. ಇಂತಹ ಸಂದರ್ಭದಲ್ಲಿ ಅಮಾಯಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರಕಾರ ಈ ತೀರ್ಮಾನಕ್ಕೆ ಬಂದಿದೆ’ ಎಂದಿದ್ದಾರೆ.
ಕೈಬಿಡಲಾಗುವ ಪ್ರಕರಣ
ಮೈಸೂರು ಜಿಲ್ಲೆ ಕೆ.ಎಂ.ಹಳ್ಳಿಯಲ್ಲಿ 2009ರ ಏಪ್ರಿಲ್ನಲ್ಲಿ ನಡೆದ ಕೋಮು ಘರ್ಷಣೆ ಸಂಬಂಧಿಸಿದಂತೆ ಉದಯಗಿರಿ ಠಾಣೆಯಲ್ಲಿ ಪಿಎಫ್ಐ ಮತ್ತು ಕೆಎಫ್ಡಿ ಕಾರ್ಯಕರ್ತರ ವಿರುದ್ಧ 40 ಪ್ರಕರಣಗಳು ದಾಖಲಿಸಲಾಗಿತ್ತು. ಈ ಪೈಕಿ 2 ಕೊಲೆ ಪ್ರಕರಣವನ್ನು ಹೊರತು ಪಡಿಸಿ ಉಳಿದ 38 ಪ್ರಕರಣಗಳಲ್ಲಿ ಈ ಸಂಘಟನೆಯ 214 ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ಕೈಬಿಡಲಾಗುತ್ತಿದೆ
2010 ರಲ್ಲಿ ಮುಸ್ಲಿಂ ಲೇಖಕಿ ತಸ್ಲಿಮಾ ನಸ್ರೀನ್ ಅವರ ಲೇಖನ ಪ್ರಕಟಗೊಂಡ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 114 ಮತ್ತು ಹಾಸನದಲ್ಲಿ 21 ಕೋಮು ಗಲಭೆ ಪ್ರಕರಣಗಳು ದಾಖಲಾಗಿದ್ದವು, ಅವುಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ಸರಕಾರ ನಿರ್ಧರಿಸಿದೆ.
ಕೋಮುಗಲಭೆಯಲ್ಲಿ ಸಿಕ್ಕಿ ಬೀಳುವುದು ಅಮಾಯಕರು ಮತ್ತು ಪ್ರಕರಣಗಳು ಅಮಾಯಕರ ಮೇಲೆ ದಾಖಲಾಗುತ್ತದೆ ಎಂದು ಸರಕಾರಕ್ಕೆ ತಿಳಿದಿದ್ದರೆ ಅಮಾಯಕರ ಜೀವನದೊಂದಿಗೆ ಆಟವಾಡುವ ಹಕ್ಕು ಸರಕಾರಕ್ಕಿದೆಯೇ? ಹಾಗಾದರೇ ಸರಕಾರ ತಪ್ಪಸಗುತ್ತಿದೆಯೇ ಎಂಬುದು ಯಕ್ಷಪ್ರಶ್ನೆ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.