ಬೆಳ್ತಂಗಡಿ : ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಶಾಲೆಯೊಂದರ ಛಾವಣಿ ದುರಸ್ತಿ ಬಗ್ಗೆ ಸಂಬಂಧ ಪಟ್ಟವರಿಗೆ ಅನೇಕ ಬಾರಿ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ಊರವರೆಲ್ಲ ಸೇರಿ ಪ್ರತಿಭಟನೆ ನಡೆಸಿದರು.
1995 ರಲ್ಲಿ ಪ್ರಾರಂಭವಾದ ಮುಂಡಾಜೆ ಗ್ರಾಮದ ಚಾಮುಂಡಿ ನಗರದಲ್ಲಿರುವ ಸರಕಾರಿ ಕಿ.ಪ್ರಾಥಮಿಕ ಶಾಲೆಯ ಹಂಚಿನ ಛಾವಣಿ ಸುಮಾರು 5 ವರ್ಷದಿಂದ ನಾದುರಸ್ತಿಯಲ್ಲಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ, ಶಾಸಕರಿಗೆ ಮನವಿ ಮಾಡಿಆಗಿದೆ.
1ರಿಂದ 5 ನೇ ತರಗತಿಯವರಿಗಿನ ಶಾಲೆಯಲ್ಲಿ 16 ಮಕ್ಕಳು ಇದುವರೆಗೆ ಇದ್ದು ಈ ವರ್ಷ 6 ಮಕ್ಕಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ. ಶಾಲಾಭಿವೃದ್ಧಿ ಸಮಿತಿಯವರು ಈ ಬಗ್ಗೆ ಶಿಕ್ಷಣ ಇಲಾಖೆಯವರಿಗೂ ಮನವರಿಕೆ ಮಾಡಿದ್ದಾರೆ. ಸರಕಾರಿ ಶಾಲೆಯ ಬಗ್ಗೆ ಈ ರೀತಿಯ ನಿರ್ಲಕ್ಷವನ್ನು ನೋಡಿ ಬೇಸತ್ತ ಸ್ಥಳೀಯರು ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ.
ಜೂ.1 ರಿಂದ ಶಾಲೆ ಪ್ರಾರಂಭವಾಗಿದ್ದು ಮುರಿದ ಹಂಚುಗಳ ಛಾವಣಿ ಮಕ್ಕಳನ್ನು ಸ್ವಾಗತಿತಸಿವೆ. ಮಳೆ ಪ್ರಾರಂಭವಾದರೆ ಶಾಲೆಗೆ ರಜೆ ಸಾರಬೇಕಾಗುತ್ತದೆ. ಬಹುಶಃ ಏನಾದರೂಅಪಾಯವಾದರೆ ಮಾತ್ರ ಮುಂದಿನ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಆಡಳಿತ ಕೈಗೊಂಡಿದೆ ಎಂದು ಅನಿಸುವಂತಿದೆ ಇಲ್ಲಿನ ಸ್ಥಿತಿ. ಪೋಷಕರು ಸರಕಾರಿ ಶಾಲೆಯಿಂದರೆ ಮೂಗು ಮೂರಿಯಲು ಇಂತಹ ಸ್ಥಿತಿಯೂ ಕಾರಣವಾಗಿದೆ. ಇನ್ನು ಇಲ್ಲಿಗೆ ಒಂದನೇ ತರಗತಿಗೆ ಸೇರಲು ಇಚ್ಛಿಸುವ ಮಕ್ಕಳೂ ಹಿಂದೇಟು ಹಾಕಿದರೆ ಅಚ್ಚರಿಯಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.