ಕಾರವಾರ: ‘ಉತ್ತರಕನ್ನಡದ ರಕ್ತದಾನಿಗಳ ವಿವರವುಳ್ಳ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯತೆ ಇದ್ದವರಿಗೆ ಅದನ್ನು ಸರಬರಾಜು ಮಾಡಿಸಿಕೊಡುವ ಕೊಂಡಿಯಾಗಿ ಕಾರ್ಯಾಚರಿಸಲು ‘ನಮ್ಮಯುಕೆ ಬ್ಲಡ್’ ಎಂಬ ಆ್ಯಪ್ ಅನ್ನು ಇತ್ತೀಚಿಗೆ ಪರಿಚಯಿಸಲಾಗಿದೆ’ ಎಂದು ನಮ್ಮ ಯುಕೆ ತಂಡದ ಅಡ್ಮಿನ್ ಅಜಿತ್ ಆಚಾರ್ಯ ತಿಳಿಸಿದ್ದಾರೆ.
‘ಈಗಾಗಲೇ ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ನಮ್ಮ ಯುಕೆ ತಂಡದಿಂದ ಇತರರಿಗೆ ನೆರವಾಗುವ ದೃಷ್ಟಿಯಿಂದ ಈ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ. ಆ ಮೂಲಕ ರಕ್ತದ ಕೊರತೆಯಿಂದ ಸಾವಿನೊಂದಿಗೆ ಹೋರಾಡುತ್ತಿರುವವರಿಗೆ ಸಕಾಲಕ್ಕೆ ನೆರವಾಗುವ ಪ್ರತಿಜ್ಞೆ ಕೈಗೊಂಡಿದ್ದೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ನೆರವು ನೀಡುವ ಈ ಚಿಕ್ಕ ಕೊಡುಗೆಯಲ್ಲಿ ಸರ್ವರೂ ಕೈ ಜೋಡಿಸಬೇಕಾಗಿದೆ’ ಎಂದು ಅವರು ಕೋರಿದ್ದಾರೆ.
‘ತಂಡವು ರಕ್ತದಾನಿಗಳ ವಿವರದ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ ಇರುವ ರಕ್ತದಾನಿಗಳ ಹೆಸರು, ರಕ್ತದ ಗುಂಪು, ಊರು, ದೂರವಾಣಿ ಸಂಖ್ಯೆಯ ವಿವರಗಳನ್ನು ಒಂದೆಡೆ ಕಲೆಹಾಕಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ‘ನಮ್ಮಯುಕೆ ಬ್ಲಡ್’ (NAMMAUK Blood) ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ಕೇಳುವ ವಿವರಗಳನ್ನು ನಮೂದಿಸಬೇಕು. ಬಳಿಕ ಅವಶ್ಯಕತೆ ಇದ್ದಾಗ ಅದರಲ್ಲಿ ರಕ್ತದ ಗುಂಪು ಆರಿಸಿದರೆ ಅದಕ್ಕೆ ಸಂಬಂಧಿಸಿದ ದಾನಿಗಳ ಹೆಸರು, ಮೊಬೈಲ್ ನಂಬರ್ ಲಭ್ಯವಿರಲಿದೆ. ಅದನ್ನು ಪಡೆದು ನೇರವಾಗಿ ದಾನಿಗಳನ್ನು ಸಂಪರ್ಕಿಸಿ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದಾಗಿದೆ. ಒಮ್ಮೆ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಇಂಟರ್ನೆಟ್ ಇಲ್ಲದೆಯೂ ಅದನ್ನು ಉಪಯೋಗಿಸಬಹುದಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.