ಬೆಂಗಳೂರು: ಬೆಂಗಳೂರು ರಸ್ತೆಗಳ ದುರಾವಸ್ಥಿಯು ಬಗ್ಗೆ ಎಲ್ಲೆಡೆಯೂ ಸುದ್ದಿಯಾಗುತ್ತಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸರ್ಕಾರ ತೋರಿಸಿದ ಅಸಡ್ಡೆಯ ಫಲವಾಗಿ ಹಲವರ ಜೀವ ಹೋಗಿದೆ. ಪ್ರತಪ್.ಬಿ. ಎಂಬ ಉದ್ಯಮಿ, ಉಪನ್ಯಾಸಕರೊಬ್ಬರು ತಾವೇ ಮುಂದಾಗಿ ಗುಂಡಿಗಳನ್ನು ಮುಚ್ಚುವ ಕಾಯಕವನ್ನು 2016ರಿಂದ ಮಾಡುತ್ತಿದ್ದಾರೆ. ಅವರ ಮನಸ್ಸು ಇತರ ಜನರಿಗೂ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಎಲ್ಲಾ ಗುಂಡಿಗಳು ಮುಚ್ಚಿ ಹೋಗುತ್ತಿತ್ತು.
ಪ್ರತಾಪ್ ಗ್ರೌಂಡ್ ರಿಯಾಲಿಟಿ ಎಂಟರ್ಪ್ರೈಸಸ್ ಎಂಬ ಸಂಸ್ಥೆಯನ್ನು ಕಟ್ಟಿ ಅದರ ಮೂಲಕವೇ ಗುಂಡಿ ಮುಚ್ಚುವ ಅಭಿಯಾನ ಆರಂಭಿಸಿದ್ದಾರೆ. ಸ್ನೇಃಇತ, ನೆರೆಹೊರೆಯವರ, ಸುದ್ದಿ ಪತ್ರಿಕೆಗಳಲ್ಲಿ ಬಂದ ಸಾವಿನ ಘಟನೆಗಳು ಅವರನ್ನು ಈ ಕಾರ್ಯ ಮಾಡುವಂತೆ ಪ್ರೇರೇಪಿಸಿತ್ತು.
2016ರ ಸೆಪ್ಟಂಬರ್ನಲ್ಲಿ ಇವರು ಅಭಿಯಾನ ಆರಂಭಿಸಿದ್ದು, ಅವರಿಗೆ ಐಟಿ ಉದ್ಯೋಗಿಗಳಿಂದ, ಇತರ ವೃತ್ತಿಪರರಿಂದ ಭಾರೀ ಬೆಂಬಲವೂ ವ್ಯಕ್ತವಾಯಿತು.
ರಸ್ತೆ ಮುಚ್ಚುವ ಬಗ್ಗೆ ತಾಂತ್ರಿಕ ಅಧ್ಯಯನ ನಡೆಸಿ, ಕೂಲಿಯಾಳುಗಳನ್ನು ಕರೆ ತಂದು ತಂತ್ರಜ್ಞಾನಗಳನ್ನು ಬಳಸಿ ಅವರು ಗುಂಡಿ ಮತ್ತೆ ಗುಂಡಿ ಬೀಳದಂತೆ ಮುಚ್ಚುವ ಕಾಯಕ ಮಾಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.