ನವದೆಹಲಿ: 11ನೇ ಶತಮಾನದ ವಿದ್ವಾಂಸ ರಾಮಾನುಜಾಚಾರ್ಯ ಅವರ ಸ್ಮರಣಾರ್ಥ ಬಿಹಾರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು ಭಾಗವಹಿಸಲಿದ್ದಾರೆ.
1017ADನಲ್ಲಿ ಜನಿಸಿದ ರಾಮಾನುಜಾಚಾರ್ಯರ ಸಾವಿರನೇ ಜನ್ಮೋತ್ಸವವನ್ನು ಆಚರಿಸುವ ಸಲುವಾಗಿ ‘ಧರಮ್ ಸಂಸದ್’ ಜರುಗಲಿದೆ. ಅವರ ಅನುಯಾಯಿಗಳು ಭೋಜಪುರಿಯ ಚಂಡ್ವಾ ಗ್ರಾಮದಲ್ಲಿ ಯಜ್ಞವನ್ನೂ ಹಮ್ಮಿಕೊಳ್ಳಲಿದ್ದಾರೆ.
ನಿತೀಶ್ ಕುಮಾರ್ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಜೆಡಿಯು ಇದನ್ನು ಖಚಿತಪಡಿಸಿಲ್ಲ. ಭಾಗವತ್ ಅವರ ಪಾಲ್ಗೊಳ್ಳುವಿಕೆಯನ್ನು ಆರ್ಎಸ್ಎಸ್ ಮೂಲಗಳು ಖಚಿತಪಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.