ಮೈಸೂರು: ಬರೋಬ್ಬರಿ 25 ವರ್ಷಗಳ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿ ತಮ್ಮ ಮಗನೊಂದಿಗೆ ಮತ್ತೆ ಹಿಂದೂ ಧರ್ಮಕ್ಕೆ ಆಗಮಿಸಿದ್ದಾರೆ.
46 ವರ್ಷದ ಸಯ್ಯದ್ ಅಬ್ಬಾಸ್ ಮತ್ತು ಅವರ ಮಗ 20 ವರ್ಷದ ಸೈಯದ್ ಹತೀಕ್ ಅವರು ಮೈಸೂರಿನ ಆರ್ಯಭವನದಲ್ಲಿ ಶ್ರೀರಾಮ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ಹಿಂದೂ ಧರ್ಮವನ್ನು ಮತ್ತೆ ಸ್ವೀಕರಿಸಿದ್ದಾರೆ.
ಮಂಡ್ಯ ಮೂಲದವರಾಗಿದ್ದ ಶೇಷಾದ್ರಿ ಎಂಬುವವರು 25 ವರ್ಷಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡು ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದರು. ಬಳಿಕ ಅವರಿಗೆ ಸಂಬಂಧಗಳನ್ನು ಕಳೆದುಕೊಂಡ ಬಗ್ಗೆ ಬೇಸರವಾಗಿತ್ತು.
ಬಳಿಕ ಕಾರಣಾಂತರಗಳಿಂದ ಅಸಮಾಧಾನಗೊಂಡು ಹಿಂದೂ ಧರ್ಮಕ್ಕೆ ಮಗನೊಂದಿಗೆ ಮರು ಮತಾಂತರಗೊಳ್ಳುವ ನಿರ್ಧಾರ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.