ಭೋಪಾಲ್: 5ನೇ ತರಗತಿಯಲ್ಲಿ ಓದುತ್ತಿರುವ ಸ್ಲಂ ಬಾಲಕಿಯೊಬ್ಬಳು ಇತರ ಮಕ್ಕಳನ್ನೂ ಕಲಿಯುವಂತೆ ಉತ್ತೇಜಿಸುತ್ತಿರುವುದು ಮಾತ್ರವಲ್ಲದೇ ತನದೇ ಗುಡಿಸಿಲಿನಂತಹ ಮನೆಯಲ್ಲಿ ಲೈಬ್ರರಿಯನ್ನೂ ಆರಂಭಿಸಿದ್ದಾಳೆ. ಇದೀಗ ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್.
ಭೋಪಾಲ್ನಿಂದ 1 ಕಿಲೋಮೀಟರ್ ದೂರದಲ್ಲಿರುವ ದುರ್ಗಾ ನಗರದ ಮುಸ್ಕಾನ್ ಅಹಿರ್ವಾರ್ ಎಂಬ ಬಾಲಕಿ ಕಳೆದ ವರ್ಷ ‘ಬಾಲ್ ಪುಸ್ತಕಲಾಯ’ ಎಂಬ 25 ಶೈಕ್ಷಣಿಕ ಪುಸ್ತಕವುಳ್ಳ ಗ್ರಂಥಾಲಯವನ್ನು ಆರಂಭ ಮಾಡಿದ್ದಾಳೆ. ಇದೀಗ ಒಟ್ಟು 1 ಸಾವಿರ ಪುಸ್ತಕಗಳಿವೆ.
ಇದೀಗ ಆಕೆಯ ಪ್ರಯತ್ನವನ್ನು ಶ್ಲಾಘಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ಆಕೆಗೆ ವ್ಯವಸ್ಥಿತ ಗ್ರಂಥಾಲಯ ನಿರ್ಮಿಸಲು 2 ಲಕ್ಷ ರೂಪಾಯಿ ಹಣಕಾಸು ನೆರವು ಘೋಷಿಸಿದ್ದಾರೆ.
ಖುದ್ದಾಗಿ ಆಕೆಯ ನಿವಾಸಕ್ಕೆ ತೆರಳಿದ ಸಿಎಂ ಚೆಕ್ನ್ನು ಹಸ್ತಾಂತರ ಮಾಡಿದ್ದಾರೆ. ಅಲ್ಲದೇ ಒಂದು ಕೊಠಡಿ ಗ್ರಂಥಾಲಯ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.
ಮುಸ್ಕಾನ್ಳಂತಹ ಬಾಲಕಿಯರು ಮುಂದೆ ಬಂದರೆ ಸಮಾಜದ ಸ್ಥಿತಿ ಬದಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.