ನವದೆಹಲಿ: ರಸಗೊಬ್ಬರ ಸಬ್ಸಿಡಿಗಳು 2018ರ ಮಾರ್ಚ್ 31ರ ವೇಳೆಗೆ ರೈತರಿಗೆ ನೇರವಾಗಿ ವರ್ಗಾವಣೆಯಾಗಲಿದೆ. ಈ ಹಿನ್ನಲೆಯಲ್ಲಿ ದೇಶದಾದ್ಯಂತ ಸುಮಾರು 2 ಲಕ್ಷ ಪಾಯಿಂಟ್ ಆಫ್ ಸೇಲ್(ಪಿಒಎಸ್)ಗಳನ್ನು ಅಳವಡಿಸಲಾಗಿದೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ರಸಗೊಬ್ಬರ ಖಾತೆಯ ರಾಜ್ಯ ಸಚಿವ ಮಂಸೂಕ್ ಎಲ್ ಮಾಂಡವೀಯ ಅವರು ಲೋಕಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಈಗಾಗಲೇ ಪಿಒಎಸ್ ಮಶಿನ್ಗಳು 2 ಲಕ್ಷ ಔಟ್ಲೆಟ್ಗಳಿಗೆ ತಲುಪಿವೆ ಎಂದಿದ್ದಾರೆ.
ಪ್ರತಿ ರಿಟೇಲರ್ ಶಾಪ್ಗಳಲ್ಲಿ ಅಳವಡಿಸಲಾದ ಪಿಒಎಸ್ ಡಿವೈಸ್ಗಳ ಮೂಲಕವೇ ರೈತರಿಗೆ ಅಥವಾ ಖರೀದಿದಾರರಿಗೆ ರಸಗೊಬ್ಬರಗಳ ಸಬ್ಸಿಡಿ ಸಂದಾಯವಾಗಲಿದೆ. ಅಲ್ಲದೇ ಫಲಾನುಭವಿಗಳನ್ನು ಆಧಾರ್ ಕಾರ್ಡ್, ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ವೋಟರ್ ಐಡಿ ಮೂಲಕ ಗುರುತಿಸಲಾಗುತ್ತದೆ ಎಂದಿದ್ದಾರೆ.
ಈ ಯೋಜನೆಯಡಿ ವಿವಿಧ ಗ್ರೇಡ್ಗಳ ರಸಗೊಬ್ಬರಗಳಿಗೆ ಶೇ.100ರಷ್ಟು ಸಬ್ಸಿಡಿಯನ್ನು ಫಲಾನುಭವಿಗಳಿಗೆ ರಿಟೇಲರ್ಗಳು ನೀಡಿದ ವಾಸ್ತವ ಮಾರಾಟದ ಆಧಾರದ ಮೇಲೆ ರಸಗೊಬ್ಬರ ಕಂಪನಿಗಳಿಗೆ ರಿಲೀಸ್ ಮಾಡಲಾಗುತ್ತದೆ. ಈ ಯೋಜನೆಯನ್ನು 19 ಜಿಲ್ಲೆಗಳಲ್ಲಿ ಪರೀಕ್ಷಾರ್ಥವಾಗಿ ಜಾರಿಗೊಳಿಸಲಾಗಿದ್ದು, 16 ಕಡೆ ಯಶಸ್ವಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.