ನವದೆಹಲಿ: ಬೃಹತ್ ಮಟ್ಟದಲ್ಲಿ ನೈರ್ಮಲ್ಯ ಸಮೀಕ್ಷೆ ನಡೆಸುವ ‘ಸ್ವಚ್ಛ್ ಸರ್ವೇಕ್ಷಣ್ 2018’ನ್ನು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಬುಧವಾರ ಘೋಷಣೆ ಮಾಡಿದ್ದಾರೆ.
2018ರ ಜನವರಿ 4ರಿಂದ ಈ ಸಮೀಕ್ಷೆ ಆರಂಭಗೊಳ್ಳಲಿದ್ದು, ಮಾರ್ಚ್ ಅಂತ್ಯಕ್ಕೆ ಫಲಿತಾಂಶ ಘೋಷಣೆಯಾಗಲಿದೆ.
ಮೂರನೇ ವರ್ಷದ ಸ್ವಚ್ಛ್ ಸರ್ವೇಕ್ಷಣ್ ಇದಾಗಿದ್ದು, 4,041 ನಗರಗಳನ್ನು ಒಳಗೊಳ್ಳಲಿದೆ. ಕಳೆದ ವರ್ಷಕ್ಕಿಂತ 434 ನಗರಗಳನ್ನು ಹೆಚ್ಚುವರಿಯಾಗಿ ಈ ವರ್ಷ ಸಮೀಕ್ಷೆಗೊಳಪಡಿಸಲಿದೆ.
ಈ ಸಮೀಕ್ಷೆ 40 ಕೋಟಿ ಜನರನ್ನು ಒಳಗೊಳ್ಳಲಿರುವ ಕಾರಣ ಇದು ವಿಶ್ವದಲ್ಲೇ ಅತೀದೊಡ್ಡ ಸ್ವಚ್ಛತಾ ಸಮೀಕ್ಷೆ ಎಂಬ ದಾಖಲೆ ಬರೆಯುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.