ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿರುವ 10 ಮಂದಿ ಆಟಗಾರ್ತಿಯರು ರೈಲ್ವೇ ಉದ್ಯೋಗಿಗಳಾಗಿದ್ದು, ಇವರಿಗೆ ತಲಾ 13 ಲಕ್ಷ ರೂಪಾಯಿ ಗೌರವ ಧನ ನೀಡುವುದಾಗಿ ರೈಲ್ವೇ ಸಚಿವ ಸುರೇಶ್ ಪ್ರಭು ಘೋಷಿಸಿದ್ದಾರೆ.
ಮಹಿಳಾ ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತೀಯ ತಂಡ ಫೈನಲ್ನಲ್ಲಿ ಕೂದಲೆಳೆ ಅಂತರದಲ್ಲಿ ಸೋಲುಂಡು ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಆಟಗಾರ್ತಿಯರು ನೀಡಿದ ಪ್ರದರ್ಶನ ಕೋಟ್ಯಾಂತರ ಜನರ ಹೃದಯ ಗೆದ್ದಿತ್ತು.
ಇದೀಗ 10 ಆಟಗಾರ್ತಿಯರಿಗೆ 13 ಲಕ್ಷ ನಗದು ಪುರಸ್ಕಾರವನ್ನು ರೈಲ್ವೇ ಸಚಿವರು ಘೋಷಣೆ ಮಾಡಿದ್ದಾರೆ.
’ಕ್ರಿಕೆಟ್ ತಂಡದ 10 ಆಟಗಾರ್ತಿಯರು ರೈಲ್ವೇ ಇಲಾಖೆಯವರು. ನಾಯಕಿ ಹಾಗೂ ಅತ್ಯಧಿಕ ರನ್ ಗಳಿಸಿದ ಮಿಥಾಲಿ ರಾಜ್ ಕೂಡ ರೈಲ್ವೇ ಉದ್ಯೋಗಿ. ಹರ್ಮಾನ್ಪ್ರೀತ್ ಕೌರ್ ಮತ್ತು ವಿಕೆಟ್ ಕೀಪರ್ ಸುಷ್ಮಾ ವರ್ಮಾ ಕೂಡ ನಮ್ಮವರು’ ಎಂದು ಸುರೇಶ್ ಪ್ರಭು ಹೇಳಿದ್ದಾರೆ.
ಪ್ರಸ್ತುತ ರೈಲ್ವೇಯಲ್ಲಿ 20 ಪದ್ಮಶ್ರೀ, 4 ರಾಜೀವ್ ಗಾಂಧೀ ಖೇಲ್ ರತ್ನ, 158 ಅರ್ಜುನ ಪ್ರಶಸ್ತಿ ವಿಜೇತರು, 9 ದ್ಯಾನ್ಚಂದ್ ಅವಾರ್ಡ್ ವಿಜೇತರು, 7 ದ್ರೋಣಾಚಾರ್ಯ ಪ್ರಶಸ್ತಿ ವಿಜೇತರು, 2 ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್ ವಿಜೇತರು ಇದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.