ನವದೆಹಲಿ: ಮಂಗೋಲಿಯಾದ ನೂತನ ಅಧ್ಯಕ್ಷ ಖಲ್ತ್ಮಾ ಬಟ್ಟುಲ್ಗ ಅವರನ್ನು ಭಾರತಕ್ಕೆ ಭೇಟಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ. ಇದು ಮೋದಿಯ ಅತ್ಯಂತ ಚತುರ ರಾಜತಾಂತ್ರಿಕ ನಡೆಯಾಗಿದ್ದು, ಸೌತ್ ಏಷ್ಯಾದ ಅಂತಾರಾಷ್ಟ್ರೀಯ ಬಾಂಧವ್ಯಗಳ ಮೇಲೆ ಪ್ರಭಾವ ಬೀರಲಿದೆ.
ಬಟ್ಟುಲ್ಗ ಅವರು ತಮ್ಮ ಚೀನಾ ವಿರೋಧಿ ಧೋರಣೆಗೆ ಹೆಸರಾದವರು, ವರದಿಗಳ ಪ್ರಕಾರ ಈ ಧೋರಣೆಯೇ ಅವರು ಚುನಾವಣೆಯಲ್ಲಿ ಗೆಲ್ಲಲು ಸಹಕಾರಿಯಾಯಿತು. ಮಂಗೋಲಿಯಾ ಕೂಡ ಚೀನಾದ ಮೇಲೆ ಹೆಚ್ಚು ಅವಲಂಭಿತವಾಗುವುದನ್ನು ತಪ್ಪಿಸುವ ಪ್ರಯತ್ನದಲ್ಲಿದೆ. ಇದಕ್ಕೆ ನೂತನ ಅಧ್ಯಕ್ಷರು ಹೆಚ್ಚಿನ ಉತ್ತೇಜನ ನೀಡಲಿದ್ದಾರೆ.
೨೦೧೫ರಲ್ಲಿ ಮೋದಿ ಮಂಗೋಲಿಯಾದ ರಾಜಧಾನಿ ವ್ಲುನ್ಬತರ್ಗೆ ಭೇಟಿಕೊಟ್ಟಿದ್ದರು. ಆ ವೇಳೆ 1 ಬಿಲಿಯನ್ ಡಾಲರ್ ನೆರವನ್ನು ಭಾರತ ಆ ದೇಶಕ್ಕೆ ನೀಡಿತು.
ಇದೀಗ ಬಟ್ಟುಲ್ಗ ಅವರನ್ನು ಭಾರತಕ್ಕೆ ಆಹ್ವಾನಿಸುವ ಮೂಲಕ ಮೋದಿ ಚೀನಾಗೆ ತೀಕ್ಷ್ಣ ಸಂದೇಶವನ್ನು ರವಾನಿಸಿದ್ದಾರೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.