ಬೆಂಗಳೂರು: ಭಾರತದ ಬಾಹ್ಯಾಕಾಶ ಸಾಧನೆಗೆ ಮಹತ್ವದ ಕೊಡುಗೆಗಳನ್ನು ನೀಡಿದ ವಿಜ್ಞಾನಿ, ದೇಶದ ಮೊದಲ ಉಪಗ್ರಹ ಆರ್ಯಭಟದ ರೂವಾರಿ, ಇಸ್ರೋದ ಮಾಜಿ ಅಧ್ಯಕ್ಷ ಉಡುಪಿ ರಾಮಚಂದ್ರ ರಾವ್ ನಿಧನರಾಗಿದ್ದಾರೆ.
85 ವರ್ಷ ರಾವ್ ಅವರು ವಯೋ ಸಹಜ ಕಾಯಿಲೆಯಿಂದ ಪೀಡಿತರಾಗಿದ್ದು, ಇಂದು ಬೆಳಿಗ್ಗೆ ಸುಮಾರು 3 ಗಂಟೆಗೆ ತಮ್ಮ ಬೆಂಗಳೂರಿನ ಈಸ್ಟರ್ನ್ ಸಬರ್ಬ್ ನಿವಾಸದಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ.
ಪ್ರಸ್ತುತ ರಾವ್ ಅವರು ಅಹ್ಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯ ಆಡಳಿತ ಮಂಡಳಿ ಮುಖ್ಯಸ್ಥನಾಗಿ, ಬೆಂಗಳೂರಿನ ನೆಹರೂ ತಾರಾಲಯದ ಮುಖ್ಯಸ್ಥನಾಗಿ, ತಿರುವನಂತಪುರಂ ಐಐಎಸ್ಟಿಯ ಚಾನ್ಸೆಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
1979ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದ ಇವರು, 2017ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಬಾಜನರಾಗಿದ್ದರು.
ವಾಷಿಂಗ್ಟನ್ನ ಸೆಟ್ಲೈಟ್ ಹಾಲ್ ಆಫ್ ಫೇಮ್ ಮತ್ತು ಇಂಟರ್ನ್ಯಾಷನಲ್ ಅಸ್ಟ್ರೋನ್ಯಾಟಿಕಲ್ ಫೆಡರೇಶನ್ಗೆ ಸೇರ್ಪಡೆಗೊಂಡಿದ್ದ ಏಕೈಕ ಭಾರತೀಯ.
ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ, ಬನರಾಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ, ಗುಜರಾತ್ ವಿಶ್ವವಿದ್ಯಾಲಯದಿಂದ ವಿಕ್ರಮ್ ಸಾರಾಭಾಯಿ ಅವರ ಮಾರ್ಗದರ್ಶನದಲ್ಲಿ ಪಿಎಚ್ಡಿ ಪದವಿ ಪಡೆದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.