ನವದೆಹಲಿ: ರಾಮನಾಥ್ ಕೋವಿಂದ್ ಅವರು ದೇಶದ 14ನೇ ರಾಷ್ಟ್ರಪತಿಯಾಗಿ ಹೊರಹೊಮ್ಮಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಅವರು ರಾಷ್ಟ್ರದ ಪ್ರಥಮ ಪ್ರಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮರ್ ಅವರು ಕೋವಿಂದ್ ಅವರ ಮುಂದೆ ಸುಲಭವಾಗಿಯೇ ಸೋಲೊಪ್ಪಿಕೊಂಡಿದ್ದಾರೆ.
ಕೋವಿಂದ್ ಅವರು 1945ರ ಅಕ್ಟೋಬರ್ 1ರಂದು ಉತ್ತರಪ್ರದೇಶದ ಕಾನ್ಪುರ ದೆಹತ್ನಲ್ಲಿ ಜನಿಸಿದರು. 1977ರಿಂದ 1979ರವರೆಗೆ ದೆಹಲಿ ಹೈಕೋಟ್ನಲ್ಲಿ ಕೇಂದ್ರ ಸರ್ಕಾರಿ ವಕೀಲನಾಗಿದ್ದರು. 1980-99ರವರೆಗೆ ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಸ್ಥಾಯಿ ಸಮಿತಿಯಲ್ಲಿದ್ದರು.
1995ರಲ್ಲಿ ಇವರು ರಾಜ್ಯಸಭಾ ಸಂಸದನಾಗಿ ಆಯ್ಕೆಯಾದರು. ಎರಡನೇ ಅವಧಿಗೂ ಮರು ಆಯ್ಕೆಗೊಂಡರು. ಹಲವಾರು ಸಂಸತ್ತ್ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗೆ ಇದೆ.
2015ರಲ್ಲಿ ಇವರು ಬಿಹಾರ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.