ಮುಂಬಯಿ: ಮಹಾರಾಷ್ಟ್ರ ಸರ್ಕಾರ ‘ಮಝಿ ಕನ್ಯಾ ಭಾಗ್ಯಶ್ರೀ’ ಯೋಜನೆಯ ನಿಯಮವನ್ನು ಪರಿಷ್ಕರಿಸಿದ್ದು, ಇನ್ನು ಮುಂದೆ ವಾರ್ಷಿಕ 7.5 ಲಕ್ಷ ವರಮಾನ ಇರುವ ಕುಟುಂಬಗಳೂ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಏರಿಸುವ, ಹೆಣ್ಣು ಭ್ರೂಣ ಹತ್ಯೆ ಮತ್ತು ಲಿಂಗಪತ್ತೆಯನ್ನು ತಡೆಗಟ್ಟುವ ಉದ್ದೇಶದಿಂದ 2016ರ ಎಪ್ರಿಲ್ ೧ರಂದು ಮಹಾರಾಷ್ಟ್ರ ಸರ್ಕಾರ ‘ಸುಕನ್ಯಾ’ ಯೋಜನೆಯ ಬದಲಿಗೆ ಈ ಯೋಜನೆಯನ್ನು ಜಾರಿಗೆ ತಂದಿತ್ತು.
ಈ ಹಿಂದಿನ ನಿಯಮದಂತೆ ಬಡತನ ರೇಖೆಗಿಂತ ಕೆಳಗಿರುವ, ವಾರ್ಷಿಕ ವರಮಾನ 1 ಲಕ್ಷದಷ್ಟಿರುವ ಕುಟುಂಬಗಳು ಮಾತ್ರ ಇದರ ಪ್ರಯೋಜನ ಪಡೆಯಬಹುದಾಗಿತ್ತು. ಆದರೆ ಇದೀಗ ಈ ನಿಮಯಕ್ಕೆ ಬದಲಾವಣೆ ತರಲಾಗಿದ್ದು, 7.5 ಲಕ್ಷ ವರಮಾನವಿರುವ ಕುಟುಂಬಗಳೂ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.
ಈ ಯೋಜನೆಯಡಿ ಮೊದಲ ಮಗು ಹೆಣ್ಣಾಗಿದ್ದು, ತಂದೆ ಅಥವಾ ತಾಯಿ ಕುಟುಂಬ ಯೋಜನೆ ಅಳವಡಿಸಿಕೊಂಡಿದ್ದರೆ ಅವರ ಬ್ಯಾಂಕ್ ಅಕೌಂಟ್ಗೆ 50 ಸಾವಿರ ರೂಪಾಯಿ ಜಮಾ ಮಾಡಲಾಗುತ್ತದೆ. ಎರಡನೇ ಮಗು ಹೆಣ್ಣಾಗಿದ್ದು ತಂದೆ ಅಥವಾ ತಾಯಿ ಕುಟುಂಬ ಯೋಜನೆ ಅಳವಡಿಸಿಕೊಂಡಿದ್ದರೆ 25 ಸಾವಿರ ರೂಪಾಯಿ ಜಮಾ ಆಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.