News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ: ಭೂಷಣ್

yadavನವದೆಹಲಿ: ಅರವಿಂದ್ ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಎಎಪಿಯೊಳಗೆ ಆಂತರಿಕ ಪ್ರಜಾಪ್ರಭುತ್ವ ಎಂಬುದು ಇಲ್ಲ. ತನ್ನನ್ನು ಪ್ರಶ್ನಿಸುವ ವ್ಯಕ್ತಿಗಳನ್ನು ಕೇಜ್ರಿವಾಲ್ ಇಷ್ಟಪಡುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

ಪಕ್ಷದಲ್ಲಿನ ಬಿಕ್ಕಟ್ಟಿನ ಬಗ್ಗೆ, ತಮ್ಮನ್ನು ಪಕ್ಷ ನಡೆಸಿಕೊಳ್ಳುತ್ತಿರುವುದರ ಬಗ್ಗೆ ಯೋಗೇಂದ್ರ ಯಾದವ್ ಮತ್ತು ಭೂಷಣ್ ಶುಕ್ರವಾರ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಒಡೆದು ಸರ್ಕಾರ ರಚಿಸಲು ಕೇಜ್ರಿವಾಲ್ ಬಯಸಿದ್ದರು. ನಮಗೆ ತಿಳಿಯದಂತೆ ಕಾಂಗ್ರೆಸ್ ಶಾಸಕರೊಂದಿಗೆ ಅವರು ಮಾತುಕತೆ ನಡೆಸಿದರು ಎಂದು ಆರೋಪಿಸಿರು ಭೂಷಣ್, ನನ್ನನ್ನು ಮತ್ತು ಯಾದವ್‌ರ ಬಗ್ಗೆ ಎಎಪಿಯ ಕೆಲ ಶಾಸಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೇಜ್ರಿವಾಲ್ ನಮ್ಮೊಂದಿಗೆ ಕೆಲಸ ಮಾಡಲು ಬಯಸುತ್ತಿಲ್ಲ, ಹೀಗಾಗಿ ನೀವು ರಾಜೀನಾಮೆ ನೀಡಿ ಎಂದು ನಮಗೆ ಸ್ಪಷ್ಟವಾಗಿ ಹೇಳಲಾಯಿತು. ಆದರೆ ನಾವು ರಾಜೀನಾಮೆ ನೀಡಿಲ್ಲ ಎಂದರು.

ಈ ವೇಳೆ ಯೋಗೇಂದ್ರ ಯಾದವ್ ಅವರೂ ಕೇಜ್ರಿವಾಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ಎಎಪಿ ಹೋರಾಟದಿಂದ ಹುಟ್ಟಿದ ಪಕ್ಷ. ಜನರಿಗೆ ಈ ಪಕ್ಷದ ಬಗ್ಗೆ ತುಂಬಾ ನಿರೀಕ್ಷೆಗಳಿವೆ. ಈ ಪಕ್ಷದ ಆತ್ಮವನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ.

‘ಪಕ್ಷದ ರಾಜ್ಯ ಘಟಕಗಳಿಗೆ ಸ್ವಾತಂತ್ರ್ಯ ಕೊಡಿ, ಪಕ್ಷದ ಸದಸ್ಯರು ನಡೆಸಿದ ಅಕ್ರಮಗಳ ಬಗ್ಗೆ ಎಎಪಿ ಲೋಕಪಾಲದಿಂದ ತನಿಖೆ ನಡೆಸಿ, ಪಕ್ಷದ ಕಾರ್ಯಕರ್ತರ ಮಾತನ್ನು ಕೇಳಿ, ಪಾರದರ್ಶಕತೆಯನ್ನು ಅಳವಡಿಸಿ, ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಾಳೆ ನಡೆಯುವ ವೋಟಿಂಗ್ ಸಿಕ್ರೀಟ್ ಬ್ಯಾಲೆಟ್ ಮೂಲಕ ನಡೆಯಲಿ ಎಂಬ ಐದು ಬೇಡಿಕೆಗಳನ್ನು ನಾವು ಪಕ್ಷದ ಮುಂದಿಟ್ಟಿದ್ದೇವೆ. ಈ ಐದು ಬೇಡಿಕೆಗಳು ಈಡೇರಿದರೆ ನಾವಾಗಿಯೇ ರಾಜೀನಾಮೆ ನೀಡುತ್ತೇವೆ’ ಎಂದರು.

ಕೇಜ್ರಿವಾಲ್ ಅವರು ಬೆಂಗಳೂರಿನಿಂದ ಬಂದ ಕ್ಷಣದಿಂದ ನಮಗೆ ಭೇಟಿಯಾಗಲು ಅವಕಾಶ ಕೊಡುವಂತೆ ಕೋರಿದ್ದೇವೆ. ಆದರೆ ಒಂದೇ ಒಂದು ಬಾರಿಯೂ ಅವರನ್ನು ಭೇಟಿಯಾಗಲು ನಮಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಉದ್ಭವಾಗಲು ಅರವಿಂದ್ ಕೇಜ್ರಿವಾಲ್ ಅವರೇ ಕಾರಣ ಎಂದು ಇಬ್ಬರು ನಾಯಕರು ಆರೋಪಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top