ವಾಷಿಂಗ್ಟನ್: ಭಯೋತ್ಪಾದನಾ ಪಿಡಿಗನ್ನು ತೊಲಗಿಸುವ ಅಗತ್ಯತೆಯನ್ನು ಜಗತ್ತಿಗೆ ತಿಳಿಸುವ ವಿಷಯದಲ್ಲಿ ಭಾರತ ಯಶಸ್ವಿಯಾಗಿದೆ, ಅಲ್ಲದೇ ಅಗತ್ಯಬಿದ್ದಾಗ ದೇಶದ ತನ್ನನ್ನು ತಾನು ರಕ್ಷಿಸಿಕೊಳ್ಳಲಿದೆ ಎಂಬುದು ಎಲ್ಒಸಿಯಲ್ಲಿ ನಡೆಸಲಾದ ಸರ್ಜಿಕಲ್ ಸ್ಟ್ರೈಕ್ ಮೂಲಕ ಸಾಬೀತುಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವರ್ಜಿನೀಯದ ಟೈಸನ್ಸ್ ಕಾರ್ನರ್ನ ರಿಟ್ಜ್ ಕಾರ್ಲ್ಟನ್ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಯೋತ್ಪಾದಕರ ನೆಲೆಗಳಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ ಭಾರತದ ಕ್ರಮವನ್ನು ಯಾವ ದೇಶವೂ ಪ್ರಶ್ನಿಸಿಲ್ಲ ಎಂದರು.
’20 ವರ್ಷಗಳ ಹಿಂದೆ ಭಾರತ ಭಯೋತ್ಪಾದನೆಯ ಬಗ್ಗೆ ಮಾತನಾಡಿದಾಗ ಎಲ್ಲರೂ ಅದನ್ನು ಕಾನೂನು ಸುವ್ಯವಸ್ಥೆ ಸಮಸ್ಯೆ ಎಂದು ಅಂದುಕೊಂಡರೇ ವಿನಃ ಅರ್ಥ ಮಾಡಿಕೊಳ್ಳಲಿಲ್ಲ. ಈಗ ಅವರಿಗೆ ಭಯೋತ್ಪಾದಕರೇ ಭಯೋತ್ಪಾದನೆಯ ಬಗ್ಗೆ ವಿವರಿಸಿದ್ದಾರೆ. ಹೀಗಾಗಿ ನಾವು ಏನೂ ಹೇಳಬೇಕಾಗಿಲ್ಲ’ ಎಂದರು.
ಭಾರತ ಸರ್ಜಿಕಲ್ ಸ್ಟ್ರೈಕ್ ಕೈಗೊಂಡಾಗ ಜಗತ್ತಿಗೆ ನಮ್ಮ ಶಕ್ತಿಯ ಅರಿವಾಯಿತು, ಭಾರತ ಸಾವಧಾನವನ್ನು ತೋರಿಸುತ್ತದೆ ಆದರೆ ಅಗತ್ಯಬಿದ್ದಾಗ ಸೆಟೆದು ನಿಲ್ಲುತ್ತದೆ ಎಂಬುದು ತಿಳಿಯಿತು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.