ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ದೂರದೃಷ್ಟಿಕೋನದ ಪ್ರತೀಕ ಶ್ರೀ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕ
ಕೊಡಗು : ಕಾಶಿ ಮಠ ಸಂಸ್ಥಾನದ ಆರಾಧ್ಯ ದೇವರುಗಳಾದ ಶ್ರೀ ವ್ಯಾಸರಘುಪತಿ ನರಸಿಂಹ ದೇವರ ಸಿಂಹಾಸನಾರೋಹಣ ಕಾರ್ಯಕ್ರಮ ನಡೆದು 5 ವರ್ಷಗಳು ಸಂದ ಈ ಶುಭ ಸಂಧರ್ಭದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಭಾಗಮಂಡಲದಲ್ಲಿರುವ ಭುವನೇಂದ್ರ ವೃಕ್ಷ ವಾಟಿಕೆಯಲ್ಲಿ ಸುಮಾರು 400 ಕ್ಕೂ ಅಧಿಕ ವಿವಿಧ ಅಳಿವಿನಂಚಿನಲ್ಲಿರುವ ಔಷಧಿಯ ಗಿಡ ಮರಗಳನ್ನು ನೆಡಲಾಯಿತು.
ಕೊಡಗಿನ ಪ್ರಕೃತಿ ರಮಣೀಯ ತಾಣ, ಕರ್ನಾಟಕದ ಜೀವನದಿ ತಾಯಿ ಕಾವೇರಿ ಉಗಮಿಸುವ ಪುಣ್ಯಧಾಮ, ಶ್ರೀ ಭಗಂಡೇಶ್ವರ ನೆಲೆ ನಿಂತು ಅನುಗ್ರಹಿಸುವ ಊರು ಭಾಗಮಂಡಲ. ಈ ನಿಸರ್ಗ ರಮಣೀಯ ಹಾಗೂ ಅತ್ಯಂತ ಪವಿತ್ರ ಕ್ಷೇತ್ರದಲ್ಲಿ ಕಾಶಿಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಗುರುಗಳು ಹಾಗೂ ನಮ್ಮ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸ್ವರೂಪೂದ್ದಾರಕರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಬಹು ಕಾಲದ ಕನಸಾದ ಶ್ರೀ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕ, ಇದನ್ನು ನನಸು ಮಾಡುವತ್ತ ಒಂದು ಸುಂದರ ಹಾಗೂ ಕ್ರಮಬದ್ಧವಾದ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ.
ಈ ಯೋಜನೆಯ ಸಂಪೂರ್ಣ ಉಸ್ತುವಾರಿಯನ್ನು ಹೊತ್ತಿರುವ ಪರಮ ಪೂಜ್ಯ ಗುರುಗಳು ಈ ವೃಕ್ಷ ವಾಟಿಕದಲ್ಲಿ ಈಗಾಗಲೇ ಅತೀ ಅಮೂಲ್ಯವಾದ, 400 ಕ್ಕೂ ಅಧಿಕ ವಿವಿಧ ಅಳಿವಿನಂಚಿರುವ ಔಷಧಿಯ ಗಿಡ ಮರ ಆಯುರ್ವೇದದಲ್ಲಿ ಉಲ್ಲೇಖಗೊಂಡಿರುವ ಅತೀ ಪ್ರಮುಖ ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಸಸ್ಯಗಳನ್ನು ನೆಟ್ಟು ಶ್ರೀ ಸಂಸ್ಥಾನದ ವತಿಯಿಂದ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ.
ಭವಿಷ್ಯದಲ್ಲಿ ಈ ಸುಂದರ ಆಯುರ್ವೇದ ವೃಕ್ಷ ವಾಟಿಕೆಯು ಭಾರತದ ಅತೀ ದೊಡ್ಡ ಧಾರ್ಮಿಕ, ಅಮೂಲ್ಯ ಹಾಗೂ ಅತೀ ಸುಂದರವಾದ ಆಯುರ್ವೇದ ಸಸ್ಯಕಾಶಿಯಾಗಿ ನಿರ್ಮಾಣಗೊಂಡು ಈ ಸಸ್ಯ ಸೇವೆಯಿಂದ ಪ್ರಸನ್ನಗೊಂಡು ಆಯುರ್ವೇದದ ಅಭಿಮಾನಿ ರೂಪ ಶ್ರೀ ವೇದವ್ಯಾಸ ಅಭಿನ್ನ ಶ್ರೀ ಧನ್ವಂತರಿ ದೇವರು ಪೂರ್ಣ ಪ್ರಮಾಣದಲ್ಲಿ ನೆಲಸುವ ಬಗ್ಗೆ ಯಾವುದೇ ಸಂಶಯವಿಲ್ಲ !
ಇಂತಹ ಸುಂದರ ಯೋಜನೆಯನ್ನು ತಮ್ಮ ಅಮೃತ ಹಸ್ತದಿಂದ ಮುನ್ನಡೆಸುತ್ತಿರುವ ನಮ್ಮ ಪರಮ ಪೂಜ್ಯ ಗುರುಗಳಾದ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚರಣಕಮಲಗಳಿಗೆ ಕಾಯಾ ವಾಚ ಮನಸಾ ಪ್ರಣಾಮಗಳನ್ನು ಮಾಡೋಣ, ಶ್ರೀ ಗುರುಗಳ ಕೃಪೆಗೆ ಪಾತ್ರರಾಗೋಣ ಎಂದು ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.