News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಟಲ್‌ಜಿಗೆ ಭಾರತರತ್ನ ದೊರೆತಿದ್ದು ಗೌರವದ ವಿಷಯ: ಅನಂತಕುಮಾರ್

ಮಂಗಳೂರು: ಕೇಂದ್ರ ಸರ್ಕಾರದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿರುವುದು ಗೌರವದ ವಿಷಯ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೇ ಸ್ವತಃ ಅಟಲ್‌ಜಿ ನಿವಾಸಕ್ಕೆ ತೆರಳಿ ಈ ಪ್ರಶಸ್ತಿ ನೀಡುತ್ತಿರುವುದು ಮತ್ತಷ್ಟು ಸಂತಸ ನೀಡಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು.

Ananth
ಅವರು ನಗರದ ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರನ್ನೊಳಗೊಂಡು ಬಜೆಟ್ ಮಂಡಿಸಿರುವುದು ಉತ್ತಮ ಸಂಗತಿಯಾಗಿದೆ. ಕರ್ನಾಟಕ ಸರಕಾರ 1ರಿಂದ 2 ಸಾವಿರ ಕೋಟಿ ಆಸ್ತಿ ತೆರಿಗೆಯ ಭಾಗ ನೀಡುತ್ತಿದ್ದು ಕಳೆದ 2014-15ರಲ್ಲಿ ನೀಡಿದ ಶೇ.32ರಷ್ಟು ಆಸ್ತಿ ಮತ್ತಿತರ ತೆರಿಗೆ ನೀಡಿದ್ದು, ಈ ಬಾರಿ ಶೇ.42 ಬಿಡುಗಡೆ ಮಾಡಲು ಶಿಫಾರಸು ಮಾಡಿದೆ ಎಂದರು.

ಮೊಟ್ಟ ಮೊದಲ ಬಾರಿಗೆ ಶೇ.೧೦ರಷ್ಟು ಆಸ್ತಿ ತೆರಿಗೆ ಹೆಚ್ಚಿಸಿ 25 ಸಾವಿರ ಕೋ. ಬಿಡುಗಡೆ ಮಾಡಲಾಗಿದ್ದು ರಾಜ್ಯ ಸರಕಾರ ಸಿಎಸ್‌ಎಸ್ (ಸೆಂಟ್ರಲ್ ಸ್ಪಾಂಸರ್ಡ್ ಸ್ಕೀಮ್), ಸೇರಿದಂತೆ 2014-15ರಲ್ಲಿ ೨೧ ಸಾವಿರ ಕೋ.ರೂ.ಯಂತೆ ಕೇವಲ ಶೇ.50ರಷ್ಟು ಮಾತ್ರ ವ್ಯಯಿಸಿದ್ದು, ಇನ್ನೂ 10 ಸಾವಿರ ಕೋ.ರೂ ಯನು ಇಂದಿರಾ ಆವಾಜ್, ರಾಜೀವ್ ಗಾಂಧಿ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರಕಾರ ನೆರವೇರಿಸಬೇಕು ಎಂದರು.

ರಾಜ್ಯದಲ್ಲಿ ಔಷಧಿ ಉತ್ಪಾದನೆಗೆ ಜನರಿಕ್ ಔಷಧಿ ಮತ್ತು ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಶೇ.25ರಷ್ಟು ಅನುದಾನ ನೀಡಬೇಕು ಎಂದರು. ಅಲ್ಲದೆ ರಸಗೊಬ್ಬರ ತಯಾರಿಗೆ 500 ಎಕರೆ ಜಾಗ ಮತ್ತು ಶೇ.10 ಇಕ್ವಿಟಿ ನೀಡುವಂತೆ ಕೋರಿದ್ದು ರಾಜ್ಯ ಸರಕಾರ ಈವರೆಗೆ ನೀಡಿಲ್ಲ. ರಸಗೊಬ್ಬರ ಉತ್ಪಾದನಾ ಕೇಂದ್ರ ನಿರ್ಮಾಣಕ್ಕೆ ಸುಮಾರು 50 ಕೋ.ರೂ ಅಗತ್ಯವಿದ್ದು, ಮೋದಿ ಸರಕಾರ ಒಪ್ಪಿಗೆ ನೀಡಿದರೂ ರಾಜ್ಯ ಸರಕಾರ ಇದಕ್ಕೆ ಸ್ಪಂದಿಸಿಲ್ಲ ಎಂದರು.

ದೇಶದಲ್ಲಿ ಇಂದು 12 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದಿಸುತ್ತಿದ್ದು, 2020ರ ಒಳಗಾಗಿ 20ಮಿಲಿಯನ್ ನಷ್ಟು ಏರಲಿದೆ ಎಂದರು. ಪೆಟ್ರೋ ಕೆಮಿಕಲ್ ಮತ್ತು ರಿಫೈನರಿ ಕೇಂದ್ರದ ನಿರ್ಮಾಣವು ಭಾರತ ಸರಕಾರದ ಉದ್ದೇಶವಾಗಿದ್ದು , ರಾಜ್ಯದಲ್ಲೂ ನಿರ್ಮಿಸುವಂತೆ ಸಿದ್ದರಾಮಯ್ಯ ಸರಕಾರಕ್ಕೆ ಒಪ್ಪಿಸಿದ್ದೇನೆ ಎಂದರು. 2007ರಲ್ಲೇ ಇದರ ಕುರಿತು ಯುಪಿಎ ಸರಕಾರ ಈ ಬಗ್ಗೆ ನಿರ್ಣಯಿಸಿದ್ದರೂ ಇದು ಈತನಕ ಆಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕೇರಳ ಸರಕಾರದೊಂದಿಗೆ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಕುರಿತು ಮಾತುಕತೆ ನಡೆಸಿದ್ದರೂ ಅವರು ಸಹಕರಿಸಿಲ್ಲ. ಶಾಸಕರಾದ ಆಸ್ಕರ್ ಫೆರ್ನಾಡೆಸ್ ಮತ್ತು ವೀರಪ್ಪ ಮೊಯ್ಲಿ ಕೂಡ ಇದರ ನಿರ್ಧಾರ ಕೈಗೊಂಡರೂ ಈ ವರೆಗೆ ಅದನ್ನು ಅಳವಡಿಸುವ ಕೆಲಸ ಮಾಡಿಲ್ಲ. ಸದನದಲ್ಲಿ ಇದರ ಸಮೀಕ್ಷೆ ಕುರಿತು ಮಾತುಕತೆಯೂ ನಡೆದಿದೆ ಎಂದು ಹೇಳಿದರು. ಈ ಕಾಮಗಾರಿಗೆ 500 ಎಕರೆ ಬೇಕಾಗಿದ್ದು ಕೇಂದ್ರ ಸರಕಾರ ಇದಕ್ಕೆ ಒಪ್ಪಿಗೆ ನೀಡಬೇಕಿದೆ ಎಂದರು.

ಗೋಷ್ಟಿಯಲ್ಲಿ ಶಾಸಕ ಸುನಿಲ್ ಕುಮಾರ್ ಹಾಗೂ ಮತ್ತಿನ್ನಿತರರು ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top