ಚಾಮರಾಜನಗರ: ಇದುವರೆಗೆ ನಾವು ಗ್ರಾಮಗಳಲ್ಲಿನ ಜಾತಿ ಬೇಧಗಳನ್ನು ನೋಡಿದ್ದೇವೆ, ಜಾತಿ ವಿಷಯಕ್ಕಾಗಿ ಒಂದು ಸಮುದಾಯ ಮತ್ತೊಂದು ಸಮುದಾಯವನ್ನು ಬಹಿಷ್ಕರಿಸುವ ಅನಾಗರಿಕತೆಯನ್ನೂ ನೋಡಿದ್ದೇವೆ. ಆದರೆ ನಮ್ಮದೇ ರಾಜ್ಯದ ಗ್ರಾಮವೊಂದರಲ್ಲಿ ಬಿಜೆಪಿಗೆ ಮತ ಹಾಕಿದ ಕುಟುಂಬಗಳನ್ನೇ ಬಹಿಷ್ಕರಿಸಲಾಗಿದೆ.
ಚಾಮರಾಜ ನಗರದ ಗುಂಡ್ಲುಪೇಟೆಯಲ್ಲಿ ನಡೆದ ಚುನಾವಣೆಯಲ್ಲಿ 25 ಕುಟುಂಬಗಳು ಬಿಜೆಪಿಗೆ ಮತ ಹಾಕಿದ್ದವು. ಆದರೀಗ ಅಲ್ಲಿ ಆ ಕುಟುಂಬಗಳನ್ನೇ ಸಾರ್ವಜನಿಕವಾಗಿ ಬಹಿಷ್ಕರಿಸಲಾಗಿದೆ.
ಇವರ ಅಂಗಡಿಗಳಿಗೆ ಅಲ್ಲಿನ ಯಾರೊಬ್ಬರೂ ಬರುತ್ತಿಲ್ಲ, ಇವರೊಂದಿಗಿನ ಎಲ್ಲಾ ವ್ಯವಹಾರಿಕ, ಸೌಹಾರ್ದ ಸಂಬಂಧವನ್ನು ಇತರರೂ ಮುರಿದುಕೊಂಡಿದ್ದಾರೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ಇದು ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವ ಪ್ರಯೋಜನವಾಗಿಲ್ಲ, ಬದಲಾಗಿ ಪೊಲೀಸರಿಂದಲೇ ಈ ಕುಟುಂಬಗಳು ಕಿರಿಕಿರಿ ಅನುಭವಿಸುವಂತಾಗಿದೆ.
ಜನರನ್ನು ರಾಜಕೀಯವಾಗಿ ತಾರತಮ್ಯಕ್ಕೊಳಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.