ಬೀಜಿಂಗ್ : ಭಾರತವು ಗೋಮೂತ್ರ ಮತ್ತು ಸಗಣಿಯ ವೈಜ್ಞಾನಿಕ ಗುಣಲಕ್ಷಣಗಳ ಬಗ್ಗೆ ಸಂಶೋಧನೆಯನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ಗೋವಿನ 5 ಉತ್ಪನ್ನಗಳನ್ನೊಳಗೊಂಡ ’ಪಂಚಗವ್ಯ’ದ ಬಗ್ಗೆ ಮತ್ತು ಅದರ ಔಷಧೀಯ ಗುಣ ಲಕ್ಷಣಗಳ ಬಗ್ಗೆ ಸಂಶೋಧನೆಗಳು ನಡೆಯಲಿದೆ ಎಂದಿದ್ದಾರೆ.
ಪಂಚಗವ್ಯವು ಗೋವಿನ ಸಗಣಿ, ಗೋಮೂತ್ರ, ಗೋವಿನ ಹಾಲು, ಮೊಸರು ಮತ್ತು ತುಪ್ಪವನ್ನು ಇದು ಒಳಗೊಂಡಿರುತ್ತದೆ.
ಭಾರತೀಯ ಸಾಂಪ್ರದಾಯಿಕ ಪದ್ಧತಿಯಲ್ಲಿ ಪಂಚಗವ್ಯಕ್ಕೆ ಅತಿ ಮಹತ್ವದ ಸ್ಥಾನವಿದೆ.
ಚೀನಾ ರಾಜಧಾನಿ ಬೀಜಿಂಗ್ನಲ್ಲಿ ಸ್ವಚ್ಛ ಇಂಧನ ಸಚಿವಾಲಯಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಾ. ಹರ್ಷವರ್ಧನ್ ಅವರು, ಗೋವಿನ ಹಾಲು ಮತ್ತು ಮೂತ್ರಗಳ ಬಗೆಗೆ ಇರುವ ಹಲವು ವಿವಾದಗಳಿಗೆ ಇತಿಶ್ರೀ ಹಾಡುವ ಸಲುವಾಗಿ ಈ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಈಗಾಗಲೇ ಹಲವಾರು ವಿಜ್ಞಾನಿಗಳು ಪಂಚಗವ್ಯದ ಪರಿಣಾಮಕಾರಿ ಸಾಮರ್ಥ್ಯದ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ ಇನ್ನೂ ಹೆಚ್ಚಿನ ವಿಜ್ಞಾನಿಗಳು ಮುಂದಾಗಿ ಈ ಬಗೆಗಿನ ಸಂಶೋಧನೆಗಳನ್ನು ಹಂಚಿಕೊಳ್ಳಬೇಕು ಎಂದಿದ್ದಾರೆ.
ಆಯುರ್ವೇದ ಅಥವಾ ಪಂಚಗವ್ಯದ ಬಗ್ಗೆ ಇಡೀ ಜಗತ್ತಿಗೆ ತೋರಿಸುವ ಕೊಡುವ ಮೊದಲು ನಾವು ಅದರ ಆಳವಾದ ಜ್ಞಾನವನ್ನು ಹೊಂದಿರಬೇಕು. ಮಾತ್ರವಲ್ಲದೆ ಅದಕ್ಕೆ ವೈಜ್ಞಾನಿಕ ಪುರಾವೆಗಳೂ ನಮ್ಮ ಬಳಿ ಇರಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.