ನವದೆಹಲಿ: ಸದಾ ಭಾರತೀಯ ಸೇನೆಯ ಪರವಾಗಿ ನಿಲ್ಲುವ, ಯೋಧರ ಬಗ್ಗೆ ಸ್ಫೂರ್ತಿದಾಯಕ ಸಂದೇಶಗಳನ್ನು ಬಿತ್ತರಿಸುವ ಕ್ರಿಕೆಟಿಗ ಗೌತಮ್ ಗಂಭೀರ್, ಈ ಬಾರಿ ಯೋಧರಿಗಾಗಿ ವಿನೂತನ ಮತ್ತು ಪ್ರೇರಣಾದಾಯಕ ಅಭಿಯಾನವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದಾರೆ.
‘ರಿಮೂವ್ ಜಿಜಾಕ್ ಕಿ ಪಟ್ಟಿ’ ಎಂಬ ಅಭಿಯಾನ ಆರಂಭಿಸಿರುವ ಇವರು, ಯೋಧರನ್ನು ಭೇಟಿಯಾದಾಗ ತಕ್ಷಣ ಅವರನ್ನು ಅಭಿನಂದಿಸುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
I have stepped out of my crease. Will you? @FeverFMOfficial @majorgauravarya @narendramodi @PMOIndia #BharatPositive pic.twitter.com/h8WZSJqCgx
— Gautam Gambhir (@GautamGambhir) May 29, 2017
ವೀಡಿಯೋ ರಿಲೀಸ್ ಮಾಡಿರುವ ಗಂಭೀರ್, ‘ನಾಗರಿಕರು ತಮ್ಮ ಆತಂಕಗಳನ್ನು ಬದಿಗಿಟ್ಟು ಯೋಧರನ್ನು ಕಂಡೊಡನೆ ಅಭಿನಂದಿಸಬೇಕು, ಶೇಕ್ಹ್ಯಾಂಡ್ ಮಾಡಬೇಕು, ಅವರಿಗೆ ಧನ್ಯವಾದ ತಿಳಿಸಬೇಕು. ಮಾತ್ರವಲ್ಲ ಸಾಧ್ಯವಾದರೆ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕು. ಒಟ್ಟಾರೆ ಸಮವಸ್ತ್ರಧಾರಿಗಳು ತಮ್ಮನ್ನು ತಾವು ವಿಶೇಷ ವ್ಯಕ್ತಿಗಳು ಎಂದು ಭಾವಿಸುವಂತೆ ನಾವು ಅವರನ್ನು ನೋಡಿಕೊಳ್ಳಬೇಕು’ ಎಂದು ಕರೆ ನೀಡಿದ್ದಾರೆ.
ಸುಕ್ಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳ ವಿದ್ಯಾಭ್ಯಾಸ ಹೊಣೆ ಹೊತ್ತಿರುವ ಗೌತಮ್ ಗಂಭೀರ್, ಯೋಧರ ಬಗ್ಗೆ ಅಪಾರ ಪ್ರೀತಿ, ಗೌರವವುಳ್ಳ ಸೆಲೆಬ್ರಿಟಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.