ನವದೆಹಲಿ: ನರೇಂದ್ರ ಮೋದಿ ಸರ್ಕಾರ ಅಧಿಕಾರಿ ವರ್ಗವನ್ನು ಹೆಚ್ಚು ಹೆಚ್ಚು ಕಾರ್ಯಪ್ರವೃತ್ತಗೊಳಿಸಿದ್ದು ಮಾತ್ರವಲ್ಲ, ತಮ್ಮ ಯೋಜನೆ, ಐಡಿಯಾಗಳನ್ನು ನೇರವಾಗಿ ಪ್ರಧಾನಿ ಬಳಿ ಹೇಳಿಕೊಳ್ಳುವ ಅವಕಾಶವನ್ನೂ ಪಡೆದುಕೊಂಡಿದೆ.
ಮೋದಿ ಅಧಿಕಾರವೇರಿದ ಬಳಿಕ ಪ್ರಧಾನಿ ಸಚಿವಾಲಯ ಹೆಚ್ಚು ಪ್ರಭಾವಶಾಲಿ, ಕ್ರಿಯಾಶೀಲವಾಗಿದೆ. ಹೆಚ್ಚಿನ ಸಮಸ್ಯೆಗಳು ಅಲ್ಲಿಂದಲೇ ಪರಿಹರಿಸಲ್ಪಡುತ್ತದೆ. ಅಧಿಕಾರಿಗಳು ತಮ್ಮ ಯೋಜನೆಯನ್ನು ನೇರವಾಗಿ ಪ್ರಧಾನಿಗೆ ಕಳುಹಿಸಿ ಅವರಿಂದ ಅನುಮೋದನೆಯನ್ನೂ ಪಡೆದುಕೊಳ್ಳಬಹುದಾಗಿದೆ.
ಕಿರಿಯ ಅಧಿಕಾರಿಗಳು ಕೂಡ ಮೈಗೌ ಪೋರ್ಟಲ್ ಮೂಲಕ ಮೋದಿಗೆ ತಮ್ಮ ಐಡಿಯಾಗಳನ್ನು ಕಳುಹಿಸಬಹುದು, ಇದಕ್ಕೆ ಉತ್ತಮ ಪ್ರತಿಕ್ರಿಯೆ, ಸ್ಪಂದನೆಗಳೂ ದೊರೆಯುತ್ತವೆ. ಕಾರ್ಯದರ್ಶಿಗಳೂ ತಮ್ಮ ಪ್ರೆಸಂಟೇಶನ್ಗಳನ್ನು ನೇರವಾಗಿ ನೀಡಿ ವಿಷಯದ ಬಗ್ಗೆ ತಮಗಿರುವ ಆಳ ಜ್ಞಾನವನ್ನು ಸಾಬೀತುಪಡಿಸಬಹುದು. ಹೆಚ್ಚಿನ ಬಾರಿ ಮೋದಿಯವರೇ ಸಚಿವರನ್ನು ಬಳಸದೆ ನೇರವಾಗಿ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಾರೆ.
‘ಹಿಂದಿನ ಸರ್ಕಾರವಿದ್ದಾಗ ಎಲ್ಲದಕ್ಕೂ ಸಚಿವರ ಬಳಿ ಕೇಳಬೇಕಿತ್ತು. ಆದರೀಗ ಪ್ರಧಾನಿಯ ಬಳಿಯೇ ನೇರವಾಗಿ ಸಂವಹನ ನಡೆಸುವ ಅವಕಾಶಗಳು ನಮಗೆ ದೊರೆತಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಥವಾ ನೇರವಾಗಿ ಅವರು ಅಧಿಕಾರಿ ವರ್ಗದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ’ ಎಂದು ಕಾರ್ಯದರ್ಶಿಯೊಬ್ಬರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.