ನವದೆಹಲಿ: 24 ವರ್ಷದ ಎಂಬಿಎ ವಿದ್ಯಾರ್ಥಿಯೊಬ್ಬ ಎಗ್ಗಿಲ್ಲದೆ ನಡೆಯುತ್ತಿದ್ದ ಕಿಡ್ನಿ ಮಾರಾಟ ದಂಧೆಯನ್ನು ಬಯಲು ಮಾಡುವುದಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ದಂಧೆಕೋರರೊಂದಿಗೆ ಹಲವಾರು ವಾರಗಳ ಕಾಲ ವ್ಯವಹರಿಸಿದ್ದಾನೆ.
ದೆಹಲಿಯ ಬಾತ್ರ ಆಸ್ಪತ್ರೆಗೆ ಪೊಲೀಸರು ಗುರುವಾರ ದಾಳಿ ನಡೆಸಿದ ವೇಳೆ ಕಿಡ್ನಿ ಮಾರಾಟ ಜಾಲ ಬಯಲಾಗಿದೆ. 4 ಶಂಕಿರ ದಲ್ಲಾಳಿಗಳನ್ನು ಬಂಧಿಸಲಾಗಿದ್ದುಮ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ದಂಧೆಕೋರರೊಂದಿಗೆ 40 ನಗಳ ಕಾಲ ವ್ಯವಹರಿಸಿದ ಬಳಿಕ ದಂಧೆಕೋರರ ವಿರುದ್ಧ ದಾಳಿ ನಡೆಸಲಾಯಿತು ಎಂದು ಜಂಟಿ ಪೊಲೀಸ್ ಆಯುಕ್ತ ಪ್ರವೀರ್ ರಂಜನ್ ತಿಳಿಸಿದ್ದಾರೆ.
ದಂಧೆ ಬಯಲಿಗೆ ಬರಲು ಜಯದೀಪ್ ಎಂಬ ವಿದ್ಯಾರ್ಥಿ ಪೊಲೀಸರಿಗೆ ಸಹಾಯ ಮಾಡಿದ್ದಾರೆ.
ಈತನ ಗೆಳೆಯ ಹಲವು ದಿನಗಳ ಕಾಲ ನಾಪತ್ತೆಯಾಗಿದ್ದು, ನಾಪತ್ತೆಯಾಗುವ ಮುನ್ನ ತಾನು ಲಕ್ಷಾಂತರ ಮೌಲ್ಯಕ್ಕೆ ಕಿಡ್ನಿ ಮಾರಾಟ ಮಾಡುತ್ತಿದ್ದೇನೆ ಎಂದಿದ್ದ. ಹೀಗಾಗಿ ನಾಪತ್ತೆಗೂ ಕಿಡ್ನಿ ದಂಧೆಗೂ ಲಿಂಕ್ ಇದೆ ಎಂದೆನಿಸಿ ಜಯದೀಪ್ ಈ ದಂಧೆಯನ್ನು ಬಯಲುಗೊಳಿಸುವ ನಿರ್ಧಾರಕ್ಕೆ ಬಂದರು.
ಬಳಿಕ ತಾನು ಕಿಡ್ನಿ ಮಾರಲು ಬಯಸುತ್ತೇನೆ ಎಂದು ಹೇಳಿ ದಂಧೆಕೋರರನ್ನು ಸಂಪರ್ಕ ಮಾಡಿದ್ದರು.
ದಂಧೆಕೋರ ಇವರ ಕಿಡ್ನಿಗೆ 4 ಲಕ್ಷ ನೀಡುವುದಾಗಿ ಹೇಳಿದ್ದ, ಕಾನೂನಿನ ಪ್ರಕಾರ ಸಂಬಂಧಿಗಳಿಗೆ ಮಾತ್ರ ಕಿಡ್ನಿ ನೀಡುವ ಅವಕಾಶವಿದೆ. ಆದರೆ ದಂಧೆಕೋರರು ಸುಳ್ಳು ದಾಖಲೆ ಸೃಷ್ಟಿಸಿ ಇವರ ಕಿಡ್ನಿ ಪಡೆಯಲು ಮುಂದಾಗಿದ್ದರು.
ಬಳಿಕ ಪೊಲೀಸರನ್ನು ಸಂಪರ್ಕಿಸಿದ ಜಯದೀಪ್ ಸ್ಟಿಂಗ್ ಆಪರೇಶನ್ ಮಾಡಿ ದಂಧೆಯನ್ನು ಬಯಲಿಗೆಳೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.