ನವದೆಹಲಿ: ತಮ್ಮ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ದೇಶದ ಅತೀದೊಡ್ಡ ಸೇತುವೆಯನ್ನು ಉದ್ಘಾಟಿಸಿ ಈಶಾನ್ಯ ಭಾಗಕ್ಕೆ ಅದ್ಭುತ ಉಡುಗೊರೆಯನ್ನು ನೀಡಿದ ಪ್ರಧಾನಿ ಮೋದಿ, ಆ ಸೇತುವೆಗೆ ಅಸ್ಸಾಂನ ಜನಪ್ರಿಯ ಸಂಗೀತಗಾರ ಭುಪೇನ್ ಹಜಾರಿಕಾ ಅವರ ಹೆಸರನ್ನಿಟ್ಟಿದ್ದಾರೆ.
ಸೇತುವೆ ಉದ್ಘಾಟನೆಯ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಧೋಲಾ-ಸಾದಿಯಾ ಸೇತುವೆ ಇನ್ನು ಮುಂದೆ ಭುಪೇನ್ ಹಜಾರಿಕಾ ಸೇತುವೆಯಾಗಲಿದೆ ಎಂದು ಘೋಷಿಸಿದರು.
2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಮತ್ತೆ ಆಯ್ಕೆಗೊಳ್ಳುತ್ತಿದ್ದರೆ ಈ ಸೇತುವೆ ಕಾಮಗಾರಿ ಎಂದೋ ಮುಕ್ತಾಯವಾಗುತ್ತಿತ್ತು, ಬಳಿಕ ಬಂದ ಸರ್ಕಾರ ಈ ಸೇತುವೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯ ಯೋಜನೆಗಳ ಕಾಮಗಾರಿಯನ್ನು ವಿಳಂಬಗೊಳಿಸಿತು ಎಂದರು.
‘ನೀವು ಈ ಸೇತುವೆಗಾಗಿ ಕಳೆದ 5 ದಶಕಗಳಿಂದ ಕಾಯುತ್ತಿದ್ದೀರಿ. ಇಂದು ಅದು ಸಾರ್ಥಕವಾಗಿದೆ, ಅಟಲ್ ಜೀ ಮರು ಆಯ್ಕೆಗೊಂಡಿದ್ದರೆ 10 ವರ್ಷಗಳ ಹಿಂದೆಯೇ ಇದರ ಉದ್ಘಾಟನೆಯಾಗುತ್ತಿತ್ತು. ಇದೀಗ ನಾವು ಅಟಲ್ ಜೀ ಕನಸನ್ನು ನನಸು ಮಾಡಿದೆವು’ ಎಂದರು.
ಈ ಸೇತುವೆ ಅಸ್ಸಾಂಗೆ ಮಾತ್ರವಲ್ಲ ಇಡೀ ಭಾರತಕ್ಕೆ ಹೆಮ್ಮೆಯ ಪ್ರತೀಕವಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.