ನವದೆಹಲಿ: ತನ್ನ ಮಗಳ ಸಾವಿಗೆ ನ್ಯಾಯ ಒದಗಿಸಲು ಅವಿರತ ಹೋರಾಟ ನಡೆಸಿದ್ದ ದೆಹಲಿ ಗ್ಯಾಂಗ್ ರೇಪ್ ಸಂತ್ರಸ್ಥೆ ನಿರ್ಭಯಾಳ ತಾಯಿ ಆಶಾ ದೇವಿ ಇದೀಗ ದೇಶದಲ್ಲಿನ ದವರ್ಜನ್ಯ ಪೀಡಿತ ಹೆಣ್ಣಮಕ್ಕಳಿಗೆ ಉಚಿತ ಕಾನೂನು ನೆರವು ನೀಡುವಂತಹ ಫೌಂಡೇಶನ್ವೊಂದನ್ನು ಆರಂಭಿಸಿದ್ದಾರೆ.
ತನ್ನ ಮಗಳ ಸಾವಿಗೆ ನ್ಯಾಯ ಒದಗಿಸಲು ಹೋರಾಟ ನಡೆಸಿದ್ದ ಅವರಿಗೆ ಕಾನೂನು ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಸಂಕಷ್ಟಗಳು ಎದುರಾಗಿದ್ದವು. ಬಳಿಕ ಅವರು ಭಾರತದ ಪ್ರಮುಖ ವಕೀಲರ ಹುಡುಕಾಟ ವೇದಿಕೆ ಲಾರಟೊ.ಕಾಮ್ನೊಂದಿಗೆ ಸಂಪರ್ಕ ಬೆಳೆಸಿದರು. ಅದರ ಉಚಿತ ಕಾನೂನು ಸಲಹೆ ಕಾರ್ಯಕ್ರಮದಡಿ ಆಕೆಗೆ ಟಾಪ್ ಲಾಯರ್ಗಳ ನೆರವು ಸಿಕ್ಕಿತು. ಇದೀಗ ನಿರ್ಭಯಾಗೆ ನ್ಯಾಯ ಸಿಕ್ಕಿದ್ದು, ಅಪರಾಧಿಗಳಿಗೆ ಶಿಕ್ಷೆಯಾಗಿದೆ.
ಕಾನೂನು ಪ್ರಕ್ರಿಯೆಯ ಸ್ವಅನುಭವ ಪಡೆದಿರುವ ಅವರು ಇದೀಗ ಲಾರಟೋ.ಕಾಂನ ಸಹಭಾಗಿತ್ವದಲ್ಲಿ ನ್ಯಾಯಜ್ಯೋತಿ ಫೌಂಡೇಶನ್ ಆರಂಭಿಸಿದ್ದು, ಇದರ ಮುಖೇನ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಉಚಿತ ಕಾನೂನಿನ ನೆರವನ್ನು ನೀಡಲಿದ್ದಾರೆ.
ಫೌಂಡೇಶನ್ ಉದ್ಘಾಟನೆಯ ವೇಳೆ ಮಾತನಾಡಿದ ಅವರು, ಕಾನೂನು ವ್ಯವಸ್ಥೆಯಿಂದ ನನ್ನ ಮಗಳಿಗೆ ನ್ಯಾಯ ಸಿಕ್ಕಿದೆ. ದೇಶದಲ್ಲಿನ ಎಲ್ಲಾ ಹೆಣ್ಣು ಮಕ್ಕಳಿಗೂ ನ್ಯಾಯ ಸಿಗಬೇಕು ಎಂದರು.
ದೇಶದ 400 ನಗರಗಳಲ್ಲಿ ಲಾರಟೊ ನೆಟ್ವರ್ಕ್ ಮೂಲಕ 4,500 ವಕೀಲ ಕಾನೂನು ಸಲಹೆ, ನೆರವನ್ನು ಅಗತ್ಯವಿರುವವರಿಗೆ ನ್ಯಾಯ ಜ್ಯೋತಿ ಫೌಂಡೇಶನ್ ಒದಗಿಸಿಕೊಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.