ಸೇನಾಪತಿ: ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಸೇನಾಪತಿ ಜಿಲ್ಲೆಗೆ 202 ಕೋಟಿ ರೂಪಾಯಿ ಆರ್ಥಿಕ ಮತ್ತು ಅಭಿವೃದ್ಧಿ ಪ್ಯಾಕೇಜನ್ನು ಘೋಷಿಸಿದ್ದಾರೆ.
ಸೇನಾಪತಿ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ ಬರಕ ಸ್ಪ್ರಿಂಗ್ ಫೆಸ್ಟಿವಲ್ 2017ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಂಗ್ ಸರಕಾರದ 100 ದಿನಗಳ ಯೋಜನೆಗಳಲ್ಲಿ ಮಾವೋ-ಇಂಪಾಲ ವಲಯದ ಹೆದ್ದಾರಿ 2ರ ಗುಂಡಿಗಳನ್ನು ಮುಚ್ಚುವುದು ಕೂಡ ಸೇರಿದೆ ಎಂದರು.
ಅಲ್ಲದೇ ಮಣಿಪುರ್ ಶಾಂಘೈ ಫೇಸ್ಟಿವಲ್, ಶಿರುಯಿ ಲಿಲಿ ಫೆಸ್ಟಿವಲ್ ಮಾದರಿಯಲ್ಲೇ ಮುಂದಿನ ವರ್ಷದಿಂದ ರಾಜ್ಯ ಮಟ್ಟದಲ್ಲಿ ಬರಕ ಸ್ಪ್ರಿಂಗ್ ಫೆಸ್ಟಿವಲ್ನ್ನು ಆಯೋಜನೆ ಮಾಡುತ್ತೇವೆ, ಇದಕ್ಕಾಗಿ ಸ್ಥಳೀಯ ಸಂಘಟನಾ ಸಮಿತಿಗಳೊಂದಿಗೆ ಕೈ ಜೋಡಿಸುತ್ತೇವೆ ಎಂದು ಅವರು ಹೇಳಿದರು.
ಮುಂದಿನ ವರ್ಷದಿಂದ ಬರಕ ಸ್ಪ್ರಿಂಗ್ ಫೆಸ್ಟಿವಲ್ನ ಮುದ್ರಾಖರ್ಚುಗಳನ್ನು ಸರಕಾರವೇ ಭರಿಸಲಿದೆ. ಈ ವರ್ಷದ ಆಚರಣೆಗಾಗಿ ಸಂಘಟನಾ ಸಮಿತಿಗಳಿಗೆ 50 ಲಕ್ಷ ನೆರವನ್ನು ನೀಡುತ್ತೇವೆ ಎಂದು ಹೇಳಿದರು.
ಇತರ ಜಿಲ್ಲೆಗಳಲ್ಲೂ ಇದೇ ರೀತಿಯ ರಾಜ್ಯ ಮಟ್ಟದ ಟೂರಿಸಂ ಫೆಸ್ಟಿವಲ್ಗಳನ್ನು ಆಯೋಜನೆ ಮಾಡಲು ಸರಕಾರ ಬಯಸುತ್ತೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.