ನವದೆಹಲಿ: ಕಾಶ್ಮೀರ ಕಣಿವೆಯಲ್ಲಿನ ಅಶಾಂತಿಗೆ, ಉದ್ವಿಗ್ನ ಪರಿಸ್ಥಿತಿಗಳಿಗೆ ಪಾಕಿಸ್ಥಾನವೇ ಕಾರಣ ಎಂದು ಭಾರತ ಆರೋಪಿಸುತ್ತಲೇ ಬಂದಿದೆ. ಇದೀಗ ಈ ಆರೋಪ ಮಾಧ್ಯಮವೊಂದು ನಡೆಸಿದ ಸ್ಟಿಂಗ್ ಆಪರೇಶನ್ನಲ್ಲಿ ಸಾಬೀತುಗೊಂಡಿದೆ.
ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ನ ಹಲವಾರು ಮಂದಿ ಮುಖಂಡರುಗಳು ಪಾಕಿಸ್ಥಾನದಿಂದ ಬಂದ ಹಣವನ್ನು ಸ್ವೀಕರಿಸುತ್ತಿರುವುದು ಕ್ಯಾಮೆರಾ ಮುಂದೆ ಬಟಾಬಯಲಾಗಿದೆ.
ಈ ಹಣವನ್ನು ಕಾಶ್ಮೀರವನ್ನು ಉದ್ವಿಗ್ನಗೊಳಿಸಲು ಬಳಸಲಾಗುತ್ತದೆ. ಕಲ್ಲು ತೂರಾಟಗಾರರಿಗೆ ಹಂಚಿಕೆ ಮಾಡಲಾಗುತ್ತದೆ. ಕೆಲವರು ಸ್ಥಳಿಯವಾಗಿಯೇ ನಾವು ಹಣ ಸಂಗ್ರಹಿಸಿದ್ದೇವೆ ಎಂಬುದನ್ನು ತಿಳಿಸಿದ್ದು, ಹಣಕಾಸ ನೆರವು ಹೆಚ್ಚು ಸಿಕ್ಕರೆ 2016ರ ಭಯಾನಕ ಸನ್ನಿವೇಶವನ್ನು ಮರಳಿಸುವುದಾಗಿ ತಿಳಿಸಿದ್ದಾರೆ.
ಹುರಿಯತ್ ನಾಯಕ ನೀಲಂ ಖಾನ್, ತೆಹ್ರೀಕ್ ಇ ಹುರಿಯತ್ ನಾಯಕ ಘಾಜಿ ಜಾವೇದ್ ಬಾಬ, ಜೆಕೆಎಲ್ಎಫ್ ಮುಖ್ಯಸ್ಥ ಫಾರೂಖ್ ಅಹ್ಮದ್ ದಾರ್ನ ಮುಖ ಸ್ಟಿಂಗ್ ಆಪರೇಶನ್ನಲ್ಲಿ ಬಯಲಾಗಿದೆ.
ಈ ವೀಡಿಯೋವನ್ನು ಸಿಎಂ ಮೆಹಬೂಬ ಮುಫ್ತಿ ನೋಡಿದ್ದಾರೆ. ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿದೆ, ಮುಂಬರುವ ದಿನಗಳಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಇನ್ನಷ್ಟು ಕ್ರಮಕೈಗೊಳ್ಳುವುದಾಗಿ ಜಮ್ಮು ಕಾಶ್ಮೀರದ ಹಣಕಾಸು ಸಚಿವ ಹಸೀಬ್ ದ್ರಬು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.