ನವದೆಹಲಿ: ಕೇವಲ ಒಂದು ರೂಪಾಯಿಗೆ ಭಾರತದ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಜಯ ಸಿಗುವಂತೆ ಮಾಡಿದ ಹಿರಿಯ ವಕೀಲ ಹರೀಶ್ ಸಾಲ್ವೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಸಚಿವೆ ಸುಷ್ಮಾ ಸ್ವರಾಜ್, ಜೇಟ್ಲಿ ಸೇರಿದಂತೆ ಸಮಸ್ತ ಭಾರತೀಯರಿಂದ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.
ಕುಲಭೂಷಣ್ ಅವರಿಗೆ ಪಾಕಿಸ್ಥಾನ ನೀಡಿದ್ದ ಮರಣದಂಡನೆಗೆ ತಡೆ ನೀಡಿರುವ ಅಂತಾರಾಷ್ಟ್ರೀಯ ನ್ಯಾಯಾಲಯ, ಸಂಪೂರ್ಣ ತೀರ್ಪು ಹೊರ ಬೀಳದೆ ಅವರನ್ನು ಗಲ್ಲೇಗೇರಿಸಬಾರದು ಎಂದು ತಾಕೀತು ಮಾಡಿದೆ.
ಈ ತೀರ್ಪು ಹೊರಬೀಳುತ್ತಿದ್ದಂತೆ ಸಾಲ್ವೆ ಅವರ ಕಾರ್ಯಕ್ಕೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ಮೋದಿಯೂ ಅವರ ಕಾರ್ಯವನ್ನು ಪ್ರಶಂಸಿದ್ದಾರೆ.
ಐಸಿಜೆ ಮುಂದೆ ಭಾರತದ ಪ್ರಕರಣವನ್ನು ಸಮರ್ಥವಾಗಿ ಮಂಡಿಸಿದ ಹರೀಶ್ ಸಾಲ್ವೆ ಅವರಿಗೆ ನಾವು ಚಿರಋಣಿಗಳು ಎಂದು ಸುಷ್ಮಾ ಹೇಳಿದ್ದಾರೆ.
ಉತ್ತಮ ಕಾರ್ಯ ಮಾಡಿದ್ದೀರಿ, ಭಾರತ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಹಲವಾರು ಭಾರತೀಯರು ಟ್ವಿಟರ್ನಲ್ಲಿ ಸಾಲ್ವೆ ಅವರನ್ನು ಕೊಂಡಾಡಿದ್ದು, ನೀವು ಕೇವಲ 1 ರೂಪಾಯಿ ಪಡೆದು 125 ಕೋಟಿ ಜನರ ಹೃದಯವನ್ನು ಗೆದ್ದುಕೊಂಡಿದ್ದೀರಿ ಎಂದಿದಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.