ರಾಂಚಿ : ಕುಖ್ಯಾತ ಮಾವೋವಾದಿ ನಾಯಕ ಕುಂದನ್ ಪಹನ್ ಪೊಲೀಸರಿಗೆ ಶರಣಾಗತನಾಗಿದ್ದು, ತಾನಿನ್ನು ಶಸ್ತಾಸ್ತ್ರವನ್ನು ತ್ಯಜಿಸಿ ಜಾರ್ಖಂಡ್ನ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸುವುದಾಗಿ ಹೇಳಿದ್ದಾನೆ.
ರಾಂಚಿಯಲ್ಲಿ ಎಜಿಡಿಪಿ ಸಂಜಯ್ ಲಖನ್ ಅವರ ಮುಂದೆ ಈತ ಶರಣಾಗಿದ್ದು, ಈ ವೇಳೆ ಈತನ ಕುಟುಂಬಸ್ಥರು ಕೂಡಾ ಉಪಸ್ಥಿತರಿದ್ದರು.
ಹಿರಿಯ ಪೊಲೀಸ್ ಅಧಿಕಾರಿಗಳ ಕೊಲೆಯೂ ಸೇರಿದಂತೆ ಈತನ ವಿರುದ್ಧ ಒಟ್ಟು 128 ಪ್ರಕರಣಗಳಿವೆ. ಈತನ ತಲೆಗೆ 15 ಲಕ್ಷ ರೂಪಾಯಿಗಳನ್ನು ಘೋಷಿಸಲಾಗಿತ್ತು.
ಈತನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಜಾರ್ಖಂಡ್ನ ಪ್ರಾದೇಶಿಕ ಸಮಿತಿ ಕಾರ್ಯದರ್ಶಿಯಾಗಿದ್ದ.
2008 ರಲ್ಲಿ ಸ್ಪೆಷಲ್ ಬ್ರ್ಯಾಂಚ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ಹತ್ಯೆಗೈದ ಆರೋಪ ಮತ್ತು ಐಸಿಐಸಿಐ ಬ್ಯಾಂಕ್ನ ವಾಹನದಿಂದ 5 ಕೋಟಿ ರೂ. ಹಣವನ್ನು ಲೂಟಿ ಮಾಡಿದ ಆರೋಪ ಇವನ ಮೇಲಿದೆ.
ಡಿಜಿಪಿ ಡಿಕೆ ಪಾಂಡೆ ಮತ್ತು ರಾಜ್ಯ ಸರ್ಕಾರದ ಉಪಕ್ರಮವಾದ ‘ನಯೀ ದಿಶಾ’ ದಡಿ ಮಾವೋವಾದಿಗಳಿಗೆ ಈ ವರ್ಷ ಶರಣಾಗತರಾಗಲು ಕೊನೆಯ ಅವಕಾಶವನ್ನು ನೀಡಲಾಗಿತ್ತು ಎಂದು ಡಿಜಿಪಿ ಆರ್. ಕೆ. ಮಲಿಕ್ ಅವರು ಹೇಳಿದರು.
ಶರಣಾಗತನಾದ ಬಳಿಕ ಮಾತನಾಡಿದ ಪಹನ್, ’20 ವರ್ಷಗಳನ್ನು ವ್ಯರ್ಥವಾಗಿ ಕಳೆದಿದ್ದೇನೆ. ಇನ್ನು ಮುಂದೆ ಜಾರ್ಜಂಡ್ನ ಅಭಿವೃದ್ಧಿ ಕಾರ್ಯಗಳಲ್ಲಿ ಕೈ ಜೋಡಿಸುತ್ತೇನೆ’ ಎಂದಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.