ಮಂಗಳೂರು: 13ನೇ ಶತಮಾನದ ಆಧ್ಯಾತ್ಮ ಬೋಧಕ ಮತ್ತ ದ್ವೈತ ಸಿದ್ಧಾಂತ ಪ್ರದಿಪಾದಕ ಶ್ರೀ ಮಧ್ವಾಚಾರ್ಯರ 32 ಅಡಿ ಎತ್ತರ ಏಕಶಿಲೆಯ ಪ್ರತಿಮೆಯನ್ನು ಉಡುಪಿಯ ಕುಂಜಾರುಗಿರಿ ಬೆಟ್ಟದಲ್ಲಿ ಪ್ರತಿಪ್ಠಾಪಿಸಲಾಗಿದೆ.
ಪ್ರತಿಮೆ ನಿರ್ಮಾಣದ ಕಾರ್ಯ ಉಡುಪಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ 2013ರಲ್ಲಿ ಆರಂಭಗೊಂಡಿತ್ತು. ಇದೀಗ ಕಾರ್ಯ ಸಂಪೂರ್ಣಗೊಂಡಿದೆ.
8 ಅಡಿ ಎತ್ತರದ ಪಾಣಿಪೀಠದ ಮೇಲ್ಗಡೆ ಈ ಏಕಶಿಲಾ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಮೇ 8 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದು, ಪ್ರತಿಷ್ಠಾಪನೆಯ ಪ್ರಯುಕ್ತ ಮೆರವಣಿಗೆಯು ಮಧ್ವಾಚಾರ್ಯರ ಹುಟ್ಟೂರು ಪಾಜಕದಿಂದ ಆರಂಭಗೊಂಡು ಕುಂಜಾರಗಿರಿ ಬೆಟ್ಟದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಮಠಾಧೀಶರಾದ ಶ್ರೀ ಸುಭುದೇಂದ್ರತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಂತರ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಬೃಹತ್ ಏಕಶಿಲಾ ಮೂರ್ತಿಯ ಪೀಠದಲ್ಲಿ ಶ್ರೀ ಮಧ್ವಾಚಾರ್ಯರ ಸಣ್ಣ ವಿಗ್ರಹ ಪ್ರತಿಷ್ಠಾಪಿಸಲಾಯಿತು. ಬಳಿಕ ಬೃಹತ್ ಮೂರ್ತಿಗೆ ಅಭಿಷೇಕ ಮತ್ತು ಪುಷ್ಪಾರ್ಚನೆ ನೆರವೇರಿದವು.
32 ಅಡಿ ಎತ್ತರದ, 32 ಲಕ್ಷಣೋಪೇತರಾದ ಶ್ರೀ ಮಧ್ವಾಚಾರ್ಯರ ಏಕಶಿಲಾವಿಗ್ರಹದ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಮೇ 8 ರಿಂದ ಪ್ರಾರಂಭಗೊಂಡಿದೆ. ಮಹಾಮಸ್ತಕಾಭಿಷೇಕವು ಮೇ 10 ರಂದು ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.