ಅಹಮದಾಬಾದ್ : ಗುಜರಾತ್ ಸರ್ಕಾರ 137 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನಿರ್ಧರಿಸಿದೆ.
ಗುಜರಾತ್ ಸರ್ಕಾರದ ಉಪ ಸಮಿತಿಯು ಕಳೆದ ವರ್ಷದ ಮಳೆ ಕೊರತೆಯ ಕುರಿತು ಪರಿಶೀಲನೆ ನಡೆಸಿದ ಬಳಿಕ ಈ ನಿರ್ಧಾರವನ್ನು ಕೈಗೊಂಡಿದೆ.
ಅಲ್ಲದೆ 684 ಗ್ರಾಮಗಳಿಗೆ ಸಬ್ಸಿಡಿ ದರದಲ್ಲಿ ಮೇವನ್ನು ಒದಗಿಸಲು ನಿರ್ಧರಿಸಲಾಗಿದೆ.
ಗುಜರಾತಿನ ಕಂದಾಯ ಸಚಿವ ಭುಪೇಂದ್ರಸಿನ್ಹಾ ಚುಡಾಸಮಾ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸ್ಥಳೀಯ ಪ್ರಾಧಿಕಾರಿಗಳ ಪರಿಶೀಲನೆ ಮತ್ತು ವರದಿಗಳನ್ನು ನೋಡಿದ ನಂತರ 11 ಜಿಲ್ಲೆಯ 137 ಗ್ರಾಮಗಳಿಗೆ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲು ನಿರ್ಧರಿಸಲಾಗಿದೆ.
ಪ್ರತಿನಿತ್ಯವೂ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಮೇವು ಕೊರತೆ ಕೂಡಾ ಇರುವುದರಿಂದ ಅದರ ಬಗ್ಗೆಯೂ ಪರಿಶೀಲನೆ ಮತ್ತು ವರದಿಗಳನ್ನು ಸಂಗ್ರಹಿಸಿ ಸುಮಾರು 684 ಗ್ರಾಮಗಳಿಗೆ ಸಬ್ಸಿಡಿ ದರದಲ್ಲಿ 2 ಕೆ.ಜಿ. ಯಂತೆ ನೀಡಲಾಗುವುದು ಎಂದು ಕಂದಾಯ ಸಚಿವರು ಹೇಳಿದ್ದಾರೆ.
ಉಪ ಸಮಿತಿಯು NERAGA ಯೋಜನೆಯಡಿ ಗ್ರಾಮಾಂತರ ಪ್ರದೇಶದಲ್ಲಿ ಎಷ್ಟು ಉದ್ಯೋಗವನ್ನು ನೀಡಲಾಗಿದೆ ಎಂಬುದನ್ನೂ ಪರಿಶೀಲಿಸಿದೆ. ರಾಜಕೋಟ್, ಸುರೇಂದ್ರನಗರ, ಬೋಟಡ್ ಮತ್ತು ಕಚ್ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದೆ ಎಂದರು.
ಜನರಿಗೆ ಪರಿಹಾರವನ್ನು ನೀಡಲು ಅಗತ್ಯಕ್ರಮಗಳ ಬಗ್ಗೆ, ಸ್ಥಳೀಯ ಎಂಎಲ್ಎ ಮತ್ತು ಸಂಸದರಿಗೆ ಪರಿಸ್ಥಿತಿಯ ಮೇಲ್ವಿಚಾರಣೆಯನ್ನು ಕೈಗೊಳ್ಳಲು ತಿಳಿಸಲಾಗಿದೆ ಎಂದು ಸಚಿವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.