ಜಮಖಂಡಿ : ಜಮಖಂಡಿಯ ಸ್ವಾತ್ಯಂತ್ರವೀರ ಸಾವರ್ಕರ್ ಪ್ರತಿಷ್ಠಾನವು ಏಪ್ರಿಲ್ 28 ರಂದು ‘ಸಮರಸತೆಯ ವೀರ ಸಾವರ್ಕರ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹಿಂದು ಸಮಾಜ ಮೇಲು-ಕೀಳೆಂಬ ರೋಗದಿಂದ ನರಳುತ್ತಿರುವಾಗ, ಸಾಮರಸ್ಯದ ಕಡು ಔಷಧಿಯನ್ನು ಕುಡಿಸಿ, ಮೃತ್ಯು ಮುಖದಿಂದ ಹೊರತರುವ ಪ್ರಯತ್ನ ಮಾಡಿದ ಶ್ರೇಷ್ಠ ಪರಂಪರೆಗೆ ಸೇರಿದವರು ಸಾವರ್ಕರ್. ಇವರ ಜನ್ಮದಿನವನ್ನು ಅವರ ಘನ ಉದ್ದೇಶದ ಪೂರಕವಾಗಿ ಆಚರಿಸಲು ಸ್ವಾತ್ಯಂತ್ರವೀರ ಸಾವರ್ಕರ್ ಪ್ರತಿಷ್ಠಾನವು ನಿಶ್ಚಯಿಸಿದೆ.
2017 ರ ಮೇ 28 ರ ರವಿವಾರ ಸಂಜೆ 5-30 ಕ್ಕೆ ಜಮಖಂಡಿಯ ಬಸವ ಭವನ ಮೈದಾನದಲ್ಲಿ ಕಾರ್ಯಕ್ರಮವು ನಡೆಯಲಿದ್ದು, ಪ. ಪೂ. ಶ್ರೀಮಾದಾರಚನ್ನಯ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ. RSS ಉತ್ತರ ಪ್ರಾಂತ್ ಸಹ ಸಂಘಚಾಲಕರಾದ ಮಾ. ಶ್ರೀ ಅರವಿಂದರಾವ ದೇಶಪಾಂಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸ್ವಾತಂತ್ರ್ಯವೀರನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಸ್ರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ವಾತ್ಯಂತ್ರವೀರ ಸಾವರ್ಕರ್ ಪ್ರತಿಷ್ಠಾನವು ಮನವಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.