ನವದೆಹಲಿ : ಶ್ರೇಷ್ಠ ಸಮಾಜ ಸುಧಾರಕ ಮತ್ತು ಸಂತ ಶ್ರೀ ರಾಮಾನುಜಾಚಾರ್ಯ ಅವರ 1000 ನೇ ಜಯಂತಿಯ ಅಂಗವಾಗಿ ನವದೆಹಲಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಪೋಸ್ಟಲ್ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಶ್ರೀ ರಾಮಾನುಜಾಚಾರ್ಯರ ಬದುಕಿನ ಕೇಂದ್ರ ಸಂದೇಶವೇ ಅಂತರ್ಗತ ಸಮಾಜ, ಧರ್ಮ, ತತ್ತ್ವಜ್ಞಾನ ಎಂದರು.
ರಾಮಾನುಜಾಚಾರ್ಯ ಅವರ ಶ್ರೀಮಂತ ಚಿಂತನೆಗಳೇ ಹಲವರಿಗೆ ಸ್ಫೂರ್ತಿಯಾಗಿದೆ.
ಅವರು ಮಾನವರಲ್ಲಿ ದೇವರ ಪ್ರತಿಬಿಂಬವನ್ನು ಕಂಡರು. ತಮ್ಮ ಭಕ್ತರನ್ನು ದೇವರಿಗೆ ಸಮಾನವಾಗಿ ಅವರು ಕಾಣುತ್ತಿದ್ದರು ಎಂದರು. ತಮ್ಮ ಕಾಲದ ಕೆಲವೊಂದು ಪದ್ಧತಿಗಳನ್ನು ಬದಲಾಯಿಸಿದ ಹಿರಿಮೆ ಅವರದ್ದು.
ಅವರ ಚಿಂತನೆಗಳ ಮೂಲಕವೇ ಸಾವಿರ ವರ್ಷಗಳಿಂದ ಹಲವಾರು ಚಳುವಳಿಗಳು ನಡೆದುಕೊಂಡು ಬಂದಿದೆ ಎಂದರು. ಅವರ ಚಿಂತನೆಗಳಿಂದ ಭಾರತ ಸಮಾಜ ಬಲಿಷ್ಠವಾಗಿದೆ ಎಂದರು.
ಜಗತ್ತಿನ ಭೂಪಟದಲ್ಲಿ ಭಾರತದ ಚಿತ್ರಣ ಬದಲಾಗಿದೆ. ದೊಡ್ಡ ದೇಶಗಳು ಹೊರ ನಡೆಯುವ ಹಾದಿಯಲ್ಲಿದ್ದರೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಭಾರತ ಮುನ್ನುಗ್ಗುತ್ತಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.