ಶಹಜಹಾನ್ಪುರ: ಮನಸ್ಸು ಮಾಡಿದರೆ ಪೊಲೀಸ್ ಇಲಾಖೆ ಏನು ಮಾಡಬಹುದು ಎಂಬುದನ್ನು ಉತ್ತರಪ್ರದೇಶದ ಶಹಜಹಾನ್ಪುರ ಪೊಲೀಸರು ಮಾಡಿ ತೋರಿಸಿದ್ದಾರೆ. ಅಲ್ಲಿನ ಪೊಲೀಸ್ ಮಹಾನಿರ್ದೇಶಕ ನೀಡಿದ ಕಟ್ಟಾಜ್ಞೆಯ ಹಿನ್ನಲೆಯಲ್ಲಿ ಕೇವಲ 72 ಗಂಟೆಗಳಲ್ಲಿ 27 ನಾಪತ್ತೆಯಾಗಿದ್ದ ಹೆಣ್ಣುಮಕ್ಕಳ ರಕ್ಷಣೆ ಮಾಡಿದ್ದಾರೆ.
ಶಹಜಹಾನ್ಪುರದಲ್ಲಿ 37 ನಾಪತ್ತೆ ಪ್ರಕರಣಗಳು ಬಗೆಹರಿಯದೆ ಪೆಂಡಿಂಗ್ ಉಳಿದಿದ್ದವು. ಈ ಬಗ್ಗೆ ದೂರುದಾರರು ದುಃಖ ತೋಡಿಕೊಂಡರೂ ಯಾವುದೇ ಪ್ರಯೋಜನಗಳು ಆಗಿರಲಿಲ್ಲ. ಕೊನೆಗೆ ದೂರುದಾರ ಕುಟುಂಬಗಳು ಪೊಲೀಸ್ ಮಹಾನಿರ್ದೇಶಕ ಬಿಕೆ ಸಿಂಗ್ ಅವರಲ್ಲಿ ತಮ್ಮ ನೋವನ್ನು ತೋಡಿಕೊಂಡವು. ಈ ಹಿನ್ನಲೆಯಲ್ಲಿ ಶಹಜಹಾನ್ಪುರದ ಎಲ್ಲಾ ಇನ್ಸ್ಪೆಕ್ಟರ್ಗಳಿಗೂ ‘ಕ್ರಮಗೈಗೊಳ್ಳಿ ಇಲ್ಲವೇ ಶಿಕ್ಷೆ ಅನುಭವಿಸಿ’ ಎಂದು ಅವರು ಆದೇಶ ಹೊರಡಿಸಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಇಲ್ಲಿನ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗಳನ್ನು ಕೈಗೊಂಡು ನಾಪತ್ತೆಯಾದ 39 ಬಾಲಕಿಯರ ಪೈಕಿ 27 ಮಂದಿಯನ್ನು ಹುಡುಕಿದ್ದಾರೆ. ಇದರಲ್ಲಿ 2 ವರ್ಷಗಳ ಹಿಂದೆ ನಾಪತ್ತೆಯಾದವರೂ ಇದ್ದಾರೆ. ಹೆಚ್ಚಿನವರು ಅಪ್ರಾಪ್ತರಾಗಿದ್ದರು.
ಪ್ರೀತಿಯ ಮೋಸಕ್ಕೆ ತುತ್ತಾಗಿ, ಮನೆಯವರ ಕಿರುಕುಳ ತಾಳಲಾರದೆ ನಾಪತ್ತೆಯಾದವರೇ ಇದರಲ್ಲಿ ಹೆಚ್ಚು ಎನ್ನಲಾಗಿದೆ.
ಇದೀಗ ಉಳಿದ 12 ಯುವತಿಯರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಅದೇನೆಯಿರಲಿ ಮಲಗಿದ್ದ ಪೊಲೀಸ್ ಇಲಾಖೆಯನ್ನು ಬಡಿದೆಬ್ಬಿಸಿದ ಬಿಕೆ ಸಿಂಗ್ ಅವರಿಗೆ ಹಾಟ್ಸ್ಆಫ್ ಹೇಳಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.