ಇಸ್ಲಾಮಾಬಾದ್: ಧರ್ಮ ನಿಂದನೆ ಆರೋಪದ ಮೇಲೆ ವಿದ್ಯಾರ್ಥಿಯೊಬ್ಬನನ್ನು ವಿಶ್ವವಿದ್ಯಾಲಯದ ಆವರಣದಲ್ಲೇ ಇತರ ವಿದ್ಯಾರ್ಥಿಗಳು ಹೊಡೆದು ಕೊಂದು ಹಾಕಿದ ಘಟನೆ ಪಾಕಿಸ್ಥಾನದಲ್ಲಿ ನಡೆದಿದೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯೂಸುಫ್ ಜಾಯಿ, ವೀಡಿಯೋ ಮೂಲಕ ಪಾಕ್ ವಿರುದ್ಧ ಕಿಡಿಕಾರಿದ್ದಾಳೆ
ಜಗತ್ತಿಗೆ ಅತೀ ಕೆಟ್ಟ ರೀತಿಯಲ್ಲಿ ಪಾಕಿಸ್ಥಾನ ಬಿಂಬಿತವಾಗಲು ಬೇರೆ ಯಾರೂ ಕಾರಣರಲ್ಲ, ಸ್ವತಃ ಪಾಕಿಸ್ಥಾನವೇ ಕಾರಣ ಎಂದಿದ್ದಾಳೆ.
‘ಇಸ್ಲಾಮೋಫೋಬಿಯಾದ ಬಗ್ಗೆ ನಾವು ಕೇಳುತ್ತಿದ್ದೇವೆ, ಜನ ನಮ್ಮ ದೇಶ ಮತ್ತು ಧರ್ಮಕ್ಕೆ ಕೆಟ್ಟ ಹೆಸರು ನೀಡುತ್ತಿದ್ದಾರೆ. ಕೆಟ್ಟ ಹೆಸರು ನೀಡಲು ಬೇರೆ ಯಾರೂ ಕಾರಣರಲ್ಲ. ನಾವೇ ಕೆಟ್ಟ ಹೆಸರು ಬರುವಂತೆ ಮಾಡುತ್ತಿದ್ದೇವೆ’ ಎಂದು ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
ಪಾಕಿಸ್ಥಾನ ತನ್ನ ಧರ್ಮವನ್ನು ಆಳವಾಗಿ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಆಕೆ ಕಿವಿಮಾತು ಹೇಳಿದ್ದಾಳೆ.
23 ವರ್ಷದ ಮಶಲ್ ಖಾನ್ ಎಂಬ ಪತ್ರಿಕೋದ್ಯಮದ ವಿದ್ಯಾರ್ಥಿ ತನ್ನ ಫೇಸ್ಬುಕ್ ಪೇಜ್ನಲ್ಲಿ ಧರ್ಮಕ್ಕೆ ವಿರುದ್ಧವಾದ ವಿಷಯಗಳನ್ನು ಹಾಕಿದ ಎಂಬ ಕಾರಣಕ್ಕೆ ಆತನ ಸಹಪಾಠಿಗಳೇ ಹೊಡೆದು ಅತ್ಯಂತ ಅನಾಗರಿಕ ರೀತಿಯಲ್ಲಿ ಕೊಂದು ಹಾಕಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.