News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆರ್‌ಎಸ್‌ಎಸ್‌ನಿಂದ ‘ಜ್ಞಾನ ಸಂಗಮ’ ಕಾರ್ಯಾಗಾರ: ಶಿಕ್ಷಣ ತಜ್ಞರು ಭಾಗಿ

rsssನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ 2 ದಿನಗಳ ಕಾರ್ಯಾಗಾರ ‘ಜ್ಞಾನ ಸಂಗಮ’ಕ್ಕೆ ಕೇಂದ್ರ ಮತ್ತು ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ೫೧ ಉಪ ಕುಲಪತಿಗಳು ಸೇರಿದಂತೆ 721 ಶಿಕ್ಷಣ ತಜ್ಞರು ಭಾಗವಹಿಸಿದ್ದರು.

ಸರ್ಕಾರದ ಪರಿಧಿಯಿಂದ ಹೊರಕ್ಕೆ ಭಾರತೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಶಿಕ್ಷಣದಲ್ಲಿ ಹೇಗೆ ಬದಲಾವಣೆ ತರಬಹುದು ಎಂಬುದನ್ನು ಚರ್ಚಿಸುವ ಸಲುವಾಗಿ ಈ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿತ್ತು.

ಈ ವೇಳೆ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ‘ಸರ್ಕಾರೇತರ ಮತ್ತು ಸ್ವಾಯತ್ತತೆಯ ಭಾರತ ಚಿಂತನೆ ಕೇವಲ ಪರ್ಯಾಯವಲ್ಲ ಬದಲಾಗಿ ಭಾರತೀಯ ದೃಷ್ಟಿಕೋನ ಬೆಳವಣಿಗೆಗೆ ಪ್ರಮುಖವಾಗಿ ಬೇಕಾಗಿರುವ ಅಂಶ’ ಎಂದು ಪ್ರತಿಪಾದಿಸಿದರು.

ಈ ವೇಳೆ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ‘ಸರ್ಕಾರೇತರ ಮತ್ತು ಸ್ವಾಯತ್ತತೆಯ ಭಾರತ ಚಿಂತನೆ ಕೇವಲ ಪರ್ಯಾಯವಲ್ಲ ಬದಲಾಗಿ ಭಾರತೀಯ ದೃಷ್ಟಿಕೋನ ಬೆಳವಣಿಗೆಗೆ ಪ್ರಮುಖವಾಗಿ ಬೇಕಾಗಿರುವ ಅಂಶ’ ಎಂದು ಪ್ರತಿಪಾದಿಸಿದರು.

‘ಪ್ರಜ್ಞಾ ಪ್ರವಾಹ’ದ ಮುಖ್ಯಸ್ಥ ನಂದಕುಮಾರ್ ಅವರು ಮಾತನಾಡಿ, ಡಾ.ಎಸ್.ರಾಧಕೃಷ್ನನ್ ಅವರಿಂದ ಹಿಡಿದು ಡಿ.ಎಸ್ ಕೊಟಟಾರಿ ಅವರವರೆಗಿನ ಎಲ್ಲಾ ಶಿಕ್ಷಣ ಸಮಿತಿಗಳೂ ’ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯತೆ ಇಲ್ಲ’ ಎಂಬ ಅಂಶವನ್ನು ಸ್ಪಷ್ಟವಾಗಿ ತಿಳಿಸಿವೆ ಎಂದರು.

ಅಲ್ಲದೇ ನಮ್ಮ ಶಿಕ್ಷಣದ ಗುರುತ್ವಾಕರ್ಷಣಾ ಬಲ ಪಶ್ಚಿಮಕ್ಕೆ ತಿರುಗಿದೆ ಎಂದಿರುವ ಅವರು, ಗುರುತ್ವಾಕರ್ಷಣೆಯನ್ನು ಮತ್ತೆ ಹೇಗೆ ಭಾರತೀಯತೆಗೆ ಮರಳಿಸಬೆಕು ಎಂದು ಚಿಂತನೆ ನಡೆಸುವ ಸಲುವಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top