ನವದೆಹಲಿ: ಅಪೌಷ್ಠಿಕತೆ ಭಾರತದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದ್ದು, ಮೂರನೇ ಒಂದರಷ್ಟು ಮ್ಕಕಳ ಸಾವಿಗೆ ಕಾರಣವಾಗಿದೆ. ಇದು ವಿಶೇಷವಾಗಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅಪಾಯಕಾರಿ ಅಂಶವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಕ್ಷಯ ರೋಗ ಮಕ್ಕಳ 10 ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ವಾರ್ಷಿಕ ಸರಿಸುಮಾರು 5,00,000 ಮಕ್ಕಳು ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.
ಕ್ಷಯ ರೋಗ ಮೈಕ್ರೋಬ್ಯಾಕ್ಟೀರಿಯಂ ಟ್ಯೂಬರ್ಕ್ಯೂಲೋಸಿಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತಿದ್ದು, ಸಾಮಾನ್ಯವಾಗಿ ಶ್ವಾಸಕೋಶಕ್ಕೆ ಬಾಧಿಸುವ ಮೂಲಕ ಉಂಟಾಗುತ್ತದೆ. ಸರಾಸರಿ 10-15 ಪ್ರತಿಶತ ಕ್ಷಯರೋಗಿಗಳು 14 ವರ್ಷದ ಒಳಗಿನವರಾಗಿದ್ದಾರೆ.
ಭಾರತದಲ್ಲಿ ಟಿಬಿ ರೋಗಕ್ಕೆ ಒಳಗಾಗುವ ಮಕ್ಕಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ. ವಿಶ್ವದ 6 ರಾಷ್ಟ್ರಗಳಲ್ಲಿ ಶೇ.60 ಟಿಬಿ ಪ್ರಕರಣಗಳು ಉಂಟಾಗಿದ್ದು ಭಾರತ ಮುಂಚೂಣಿಯಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಪ್ರತಿ ವರ್ಷ ಮಾ.24ರಂದು ವಿಶ್ವ ಕ್ಷಯ ದಿನ ಆಚರಿಸಲಾಗುತ್ತಿದ್ದು, ಜಗತ್ತಿನಾದ್ಯಂತ ಇದರ ತಡೆಗೆ ಜಾಗೃತಿ ಮೂಡಿಸಲಾಗುತ್ತದೆ.
ವಿಶ್ವ ಕ್ಷಯ ದಿನ 2017ರ ಥೀಮ್ ‘ಟಿಬಿ ಕೊನೆಗೊಳಿಸಲು ಒಂದಾಗಿ’ ಎಂಬುದಾಗಿದೆ. ಇದು ಎರಡು ವರ್ಷಗಳ ವಿಶ್ವ ಕ್ಷಯ ದಿನದ ಥೀಮ್ ಆಗಿದ್ದು, ಇದು ಈ ಥೀಮ್ನ ಎರಡನೇ ವರ್ಷಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ‘ಯುನೈಟ್ ಟು ಎಂಡ್ ಟಿಬಿ: ಲೀವ್ ನೋ ಒನ್ ಬಿಹೈಂಡ್’ಗೆ ವಿಶೇಷ ಒತ್ತು ನೀಡಿ ಒಂದುಗೂಡಿಸಲು ಪ್ರಯತ್ನಿಸಲಿದೆ.
ಇದು ತಾರತಮ್ಯ, ಕಳಂಕ, ಕೆಳಮಟ್ಟ ಎಲ್ಲ ಅಡೆತಡೆಗಳನ್ನು ಮರೆತು ಆರೈಕೆ ನೀಡುವುದು ಸೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.