News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತಾಲೂಕು ಪಂಚಾಯತ್ ಸಾಮಾನ್ಯ ಸಭೆ

ಕಾರ್ಕಳ: ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಗೊಂದಲದ ಗೂಡಾಗಿ ಮಾರ್ಪಟ್ಟ ಘಟನೆ ಬುಧವಾರದಂದು ತಾಲೂಕು ಪಂಚಾಯತ್‌ನ ಮೇಜರ್ ಉಣ್ಣಿಕೃಷ್ಣನ್ ಸ್ಮಾರಕ ಸಭಾಂಗಣದಲ್ಲಿ ನಡೆದಿದೆ.

Taluk

ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಕಳೆದ ಸಭೆಯಲ್ಲಿ ಕ್ರಿಯಾಲೋಪವಾಗಿರುವ ಬಗ್ಗೆ ಪ್ರತಿಪಕ್ಷ ಸದಸ್ಯ ಕ್ಸೇವಿಯರ್ ಡಿಮೆಲ್ಲೋ ಸಭೆಯಲ್ಲಿ ಪ್ರಸ್ತಾಪಿಸಿದರು.

ಫೆಬ್ರವರಿ 10ರಂದು ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗೈರುಹಾಜರಾಗಿದ್ದರು. ಕಾರ್ಯಕಲಾಪ ನಡವಳಿ ಕಡತದಲ್ಲಿ ಅವರ ಸಹಿ ಎದ್ದುಕಾಣುತ್ತಿದೆ. ಗೈರುಹಾಜರಾದ ಕಾರ್ಯನಿರ್ವಹಣಾಧಿಕಾರಿ ಅದಕ್ಕೆ ಸಹಿ ಹಾಕುವುದು ಕಾನೂನು ಬಾಹಿರ. ಸಭೆಗೆ ಸಲ್ಲಿಸಿದ ಅಗೌರವ. ಕರ್ತವ್ಯಲೋಪವಾಗಿದೆ. ಕ್ರಿಯಾಲೋಪ ಎದ್ದುಕಾಣುತ್ತಿದ್ದು ಇದನ್ನೆಲ್ಲ ಕಡೆಗಣಿಸಿ ಸಭೆ ಮುಂದುವರಿಸುವುದು ಕಾನೂನು ಬಾಹಿರವಾಗಿರುತ್ತದೆ. ಆ ನಿರ್ಣಯಗಳನ್ನು ರದ್ದು ಮಾಡದೇ ಹೋದಲ್ಲಿ ಅದರ ವಿರುದ್ಧ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ತಾಲೂಕು ಪಂಚಾಯತ್ ಅಧ್ಯಕ್ಷರು ಕೂಡ ಕಡತಕ್ಕೆ ಸಹಿ ಹಾಕಿರುವುದರಿಂದ ಅವರು ಕೂಡ ಸರಿಸಮಾನವಾಗಿ ಅದರಲ್ಲಿ ಭಾಗಿಯಾಗಿರುತ್ತಾರೆ. ಸಭೆ ಮುಂದುವರಿಯಬೇಕಾದರೆ ಘಟನೋತ್ತರ ಮಂಜೂರಾತಿ ನೀಡುವಂತೆ ಅವರು ಇದೇ ವೇಳೆಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಕುಮಾರ್ ಹಾಗೂ ಕ್ಸೇವಿಯರ್ ಡಿಮೆಲ್ಲೋ ನಡುವೆ ವಾಗ್ದಾದ ನಡೆದಿದ್ದು, ವಿಕ್ರಂ ಹೆಗ್ಡೆ ಪರಿಸ್ಥಿತಿ ನಿಭಾಯಿಸುವಲ್ಲಿ ಸಫಲರಾದರು. ಮೇಲಿನ ವಿಚಾರವನ್ನು ಕಡತದಲ್ಲಿ ದಾಖಲಿಸಿ ಅದನ್ನು ಸಭೆಯಲ್ಲಿ ವಾಚಿಸುವ ಮೂಲಕ ಘಟನೋತ್ತರ ಮಂಜೂರಾತಿ ನೀಡಲಾಯಿತು.

ಗಾಳಿಗೆ ತೂರಲಾದ ಸಭಾ ನಿಯಮಾವಳಿ: ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಪಂಚಾಯತ್‌ನಲ್ಲಿ ತನ್ನ ಅಧೀನದಲ್ಲಿ ಇರುವ ಸೊತ್ತುಗಳ ಸವಿಸ್ತಾರ ಮಾಹಿತಿ ಕಚೇರಿಯಲ್ಲಿ ಇಲ್ಲ. ಆದಾಯವನ್ನು ಕ್ರೋಢೀಕರಿಸಬೇಕಾಗಿದ್ದ ತಾಲೂಕು ಪಂಚಾಯತ್ ಆಡಳಿತ ವರ್ಗವು ಕಳೆದ 15 ವರ್ಷಗಳಿಂದ ತಾಲೂಕು ಪಂಚಾಯತ್ ಅಧೀನದಲ್ಲಿ ಇರುವಂತಹ ಕಟ್ಟಡಗಳ ಮಳಿಗೆಗೆ ಮಾಸಿಕ ಬಾಡಿಗೆ ನಿಗದಿ ಪಡಿಸಲು ಏಲಂ ಕರೆಯದೇ ಅವ್ಯವಹಾರ ನಡೆಸಿದೆ. ಇದರ ಬಗ್ಗೆ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ರೀತಿಯಲ್ಲಿ ಸ್ವಂದನೆ ಸಿಗಲಿಲ್ಲ. ಈ ನಡುವೆ ರಾಷ್ಟ್ರೀಯ ಬ್ಯಾಂಕ್‌ವೊಂದರ ಎಟಿಎಂ ತೆರೆಯಲು ತಾಲೂಕು ಪಂಚಾಯತ್‌ನ ಅಧೀನದ ಕಟ್ಟಡವೊಂದರ ಮಳಿಗೆಯನ್ನು ಗೊತ್ತುಪಡಿಸಲಾಗಿದೆ. ಅತೀ ಕಡಿಮೆ ಬಾಡಿಗೆಯನ್ನು ಅದಕ್ಕೆ ನಿಗದಿ ಪಡಿಸಿಸಲಾಗಿದೆ. ಕೈಗೊಂಡ ನಿರ್ಧಾರ ಏಕಪಕ್ಷೀಯವಾಗಿದೆ ಎಂದು ಸದಸ್ಯ ಸುಜಿತ್ ಶೆಟ್ಟಿ ಸಭೆಯಲ್ಲಿ ಅಕ್ಷೇಪ ವ್ಯಕ್ತಪಡಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top