ಮಂಗಳೂರು : ಮಹಾತ್ಮ ಗಾಂಧೀಜಿ ಅವರು ಕರ್ನಾಟಕಕ್ಕೆ ಮೊದಲು ಭೇಟಿ ನೀಡಿದ ಶತಮಾನೋತ್ಸವವನ್ನು ಶುಕ್ರವಾರ ಮಂಗಳೂರಿನಲ್ಲಿ ವಾರ್ತಾ ಇಲಾಖೆಯ ನೇತೃತ್ವದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ‘ನೂರು ವರ್ಷಗಳ ಹಿಂದೆ, 1915ರ ಮೇ8ರಂದು ಗಾಂಧಿಜೀ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದಿದ್ದರು. ಇಂದು ನಾವು ಆ ಸವಿನನಪನ್ನು ಆಚರಿಸುತ್ತಿದ್ದೇವೆ’ ಎಂದರು.
ಭಾರತದಲ್ಲಿ ಎಲ್ಲವೂ ಸಾಧ್ಯ. ರೈತ ಕುಂಟುಂಬದಿಂದ ಬಂದ ದೇವೇಗೌಡರು ಪ್ರಧಾನಿಯಾದರು, ಟೀ ಮಾರುತ್ತಿದ್ದ ಹುಡುಗ ಇಂದು ಪ್ರಧಾನಮಂತ್ರಿಯಾಗಿದ್ದಾರೆ. ಮಹಿಳಾ ಸಶಕ್ತಿಕರಣದ ಬಗ್ಗೆ ನಾವಿಂದು ಮಾತನಾಡುತ್ತೇವೆ ಆದರೆ ಇಂದಿರಾ ಗಾಂಧಿಯವರು ಮಹಿಳಾ ಪ್ರಧಾನಿಯಾಗಿ ಈಗಾಗಲೇ ಇತಿಹಾಸ ಸೃಷ್ಟಿಸಿದ್ದಾರೆ. ಅದ್ಭುತಗಳು ನಡೆಯುವ ಏಕೈಕ ದೇಶ ಭಾರತ’ ಎಂದರು.
ಗಾಂಧೀಜಿ ನಮಗೆ ಧಾರ್ಮಿಕ ಸಹಿಷ್ಣುತೆ ಮತ್ತು ಅಹಿಂಸೆ ಬಗ್ಗೆ ಕಲಿಸಿಕೊಟ್ಟಿದ್ದಾರೆ. ಇಂದಿನ ಯುವಜನಾಂಗದ ಬಳಿ ಅಪಾರ ಶಕ್ತಿಯಿದೆ. ನಾವು ಪ್ರಗತಿ ಹೊಂದುತ್ತಿದ್ದಂತೆ ಮುಂದಿನ ತಲೆಮಾರಿಗೂ ಗಾಂಧೀಜಿಯವರ ಸಿದ್ಧಾಂತಗಳನ್ನು ಮುಟ್ಟುವಂತೆ ಮಾಡುವ ಅವಶ್ಯಕತೆ ಇದೆ. ಈ ಸಂಭ್ರಮ ಒಂದು ದಿನಕ್ಕೆ ಸೀಮಿತಗೊಳ್ಳಬಾರದು, ಇದು ಮುಮದುವರೆಯುತ್ತಲೇ ಇರಬೇಕು. ಅದುವೇ ನಾವು ರಾಷ್ಟ್ರಪಿತನಿಗೆ ನೀಡುವ ಅತಿದೊಡ್ಡ ಗೌರವ, ಅವರ ಕನಸಿನ ದೇಶವನ್ನು ನಿರ್ಮಿಸಲು ಬೇಕಾದ ಪ್ರತಿಜ್ಞೆ ಎಂದರು.
ಬದ್ರೀಯಾ ಕಾಲೇಜಿನ ಪ್ರಾಂಶುಪಾಲರಾದ ಪೋ.ಇಸ್ಮಾಯಿಲ್ ಅವರೂ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾರ್ತಾಧಿಕಾರಿ ಖಾದರ್ ಷಾ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.