ಪಾಟ್ನಾ: ಸಾಮಾನ್ಯವಾಗಿ ಎಲ್ಲ ಮಕ್ಕಳು ಆಟೋಟಗಳಲ್ಲಿ ತೊಡಗಿರುವ ವಯಸ್ಸಿನಲ್ಲಿ ಈ 9 ವರ್ಷದ ‘ಗೂಗಲ್ ಬಾಯ್’ ಕೌಟಿಲ್ಯ ಪಂಡಿತ್ ಮಂಗಳ ಗ್ರಹದ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡಿದ್ದಾನೆ.
ಅಸಾಧಾರಣ ಜ್ಞಾನ, ತೀಕ್ಷ್ಣ ಜ್ಞಾಪಕ ಶಕ್ತಿ ಹೊಂದಿರುವ ಕೌಟಿಲ್ಯ, ಇತರ ಹದಿಹರೆಯದ ಉನ್ನತ ಶಿಕ್ಷಣ ಹೊಂದಿರುವ ವಿದ್ಯಾರ್ಥಿಗಳಷ್ಟೇ ಬುದ್ಧಿವಂತನಾಗಿದ್ದಾನೆ.
ಸೂಪರ್ ೩೦ ಸ್ಥಾಪಕ ಆನಂದ್ ಕುಮಾರ್ ಖುದ್ದು ಓರ್ವ ಅಸಾಧಾರಣ ವ್ಯಕ್ತಿಯಾಗಿದ್ದು, ಹಲವು ಸಾಧನೆ ಮಾಡಿದ್ದಾರೆ. ಆದ್ದರಿಂದ ಈ ಬಾಲಕನನ್ನು ಆನಂದ್ ಕುಮಾರ್ ಬಳಿ ಕರೆದೊಯ್ದು ಆತನ ಸದಾಮರ್ಥ್ಯದ ಮೌಲ್ಯಮಾನ ನಡೆಸಿ ಭವಿಷ್ಯ ರೂಪಿಸಲು ನಿರ್ಧರಿಸಿರುವುದಾಗಿ ಕೌಟಿಲ್ಯನ ತಾತ ಜೆ.ಕೆ. ಶರ್ಮಾ ಹೇಳಿದ್ದಾರೆ.
ನಾನು ಖಗೋಳಶಾಸ್ತ್ರದ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಭವಿಷ್ಯದಲ್ಲಿ ಖಗೋಳ ವಿಜ್ಞಾನಿ ಆಗಲು ಬಯಸುವೆ ಎಂದು ಚಂಡಿಗಢದ ಪಂಚಕುಲಾದಲ್ಲಿರುವ ಭವನ್ ವಿದ್ಯಾಲಯದ ಕೌಟಿಲ್ಯ ಹೇಳಿದ್ದಾನೆ. ಭೌಗೋಳಿಕ ಸ್ಥಳಗಳು, ಅಂಕಿ ಅಂಶಗಳು, ಗಣಿತ ಶಾಸ್ತ್ರದ ಎಲ್ಲವನ್ನೂ ಕಲಿಯುವ ಸಾಮರ್ಥ್ಯ ಕೌಟಿಲ್ಯ ಹೊಂದಿದ್ದಾನೆ.
ಸೂಪರ್ 30 ಸಂಸ್ಥೆಯಲ್ಲಿ ಐಐಟಿ ಪ್ರವೇಶ ಪರೀಕ್ಷೆ ಮತ್ತು ಮಾಧ್ಯಮ ಪ್ರತಿನಿಧಿಗಳಾಗಿ ಸೇರಲು ತರಬೇತಿ ಪಡೆಯುತ್ತಿರುವ ಹಿಂದುಳಿದ ವರ್ಗದ ಆಕಾಂಕ್ಷಿ ವಿದ್ಯಾರ್ಥಿಗಳ ಜೊತೆ ಕೂಡ ಕೌಟಿಲ್ಯ ಸಂವಹ ನಡೆಸಿದ್ದಾನೆ.
ಮಂಗಳ ಗ್ರಹದ ಮೇಲೆ ನಡೆಯುತ್ತಿರುವ ಸಂಶೋಧನೆಗಳ ಎಲ್ಲ ಪ್ರಸ್ತುತ ಮಾಹಿತಿಗಳನ್ನು ಕೌಟಿಲ್ಯ ಹೊಂದಿದ್ದಾನೆ.
ಕೌಟಿಲ್ಯ ತನ್ನ ವಯಸ್ಸಿನ ಇತರ ಮಕ್ಕಳಿಗಿಂತ ಭಿನ್ನವಾಗಿದ್ದು, ಅಸಾಧಾರಣ ಜ್ಞಾನವನ್ನು ಎಲ್ಲರ ಮುಂದೆ ಪ್ರದರ್ಶಿಸಿದ್ದಾನೆ. ಕೌಟಿಲ್ಯನನ್ನು ಬಹಳ ಎಚ್ಚರಿಕೆಯಿಂದ ಪೋಷಿಸಬೇಕು. ಆತ ಪ್ರೀತಿಸುವ ಎಲ್ಲ ಕಾರ್ಯಗಳನ್ನು ಮಾಡಲು ಸ್ವಾತಂತ್ರ್ಯ ನೀಡಬೇಕು. ಕೌಟಿಲ್ಯನಿಗೆ ಅಗತ್ಯ ಸಹಾಯ ನೀಡಲು ಬಯಸುವುದಾಗಿ ಆನಂದ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.