ಮುಂಬಯಿ: ಅಲಕನಂದ ವೈದ್ಯ ತನ್ನ ಸೊಂಟದ ಕೆಳಗೆ ಶೇ. 90ರಷು ಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿ ಬಾರಾಮತಿಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸರ್ಕಾರಿ ನೌಕರಿ ದೊರೆತ ನಂತರ ಇವರ ಸಮಸ್ಯೆ ಹೆಚ್ಚಿದೆ.
2015ರಲ್ಲಿ ಅವರು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಮನೆಯಿಂದ 100 ಕಿ.ಮೀ. ದೂರದ ಕಚೇರಿಯಲ್ಲಿ ನೌಕರಿ ನೀಡಲಾಗಿದೆ. ಮನೆಯಿಂದ 10 ಕಿ.ಮೀ.ಅಂತರದಲ್ಲಿ ಉದ್ಯೋಗ ಒದಗಿಸಬೇಕೆಂಬುದು ಸರ್ಕಾರದ ನಿಯಮ.
ತನ್ನ ಹಾಗೂ 11 ವರ್ಷದ ಪುತ್ರಿಯ ಜೀವನಾಧಾರಕ್ಕಾಗಿ ದೊರೆತ ಉದ್ಯೋಗ ಬಿಡಲು ಇಚ್ಛಿಸದ ವೈದ್ಯ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರತಿಕ್ರಿಯೆ ದೊರೆತಿರಲಿಲ್ಲ.
ಕಳೆದ ಬಾರಿ ಸೆಪ್ಟೆಂಬರ್ 7ರಂದು ವೈದ್ಯ ಅವರು ಇತರ ದಾಖಲೆಗಳೊಂದಿಗೆ ಸಲ್ಲಿಸಿದ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, 6 ದಿನಗಳಲ್ಲಿ 85,000 ಜನರು ಸಹಿ ಹಾಕಿದ್ದಾರೆ.
ಸೆಪ್ಟಂಬರ್ 13ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಅರ್ಜಿ ಸ್ವೀಕರಿಸಿರುವುದಾಗಿ ಕರೆ ಬಂದಿದ್ದು, ವೈದ್ಯ ಅವರಿಗೆ ನೆರವು ಒದಗಿಸುವುದಾಗಿ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.
ವೈದ್ಯ ಅವರ ಅರ್ಜಿಗೆ ಈವರೆಗೆ 95,288 ಸಹಿ ದೊರೆತಿದ್ದು, ಜನರ ಪ್ರತಿಕ್ರಿಯೆ ಮತ್ತು ಸಿಎಂ ಫಡ್ನವಿಸ್ ಅವರ ಸೂಚನೆಗೆ ವೈದ್ಯ ಅವರು ಧನ್ಯವಾದ ಸೂಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.