ನವದೆಹಲಿ: ಕ್ಷಿಪ್ರಗತಿಯಲ್ಲಿ ಭಾರತದ ರೂಪಾಂತರದ ದೃಷ್ಟಿಕೋನದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಕಾನೂನಿನಲ್ಲಿ ಬದಲಾವಣೆಯ ಅಗತ್ಯವಿದೆ. ಏರುತ್ತಿರುವ ಪ್ರಗತಿಯನ್ನು ಮೀರಿ ಅನಗತ್ಯ ಕಾರ್ಯವಿಧಾನಗಳನ್ನು ತೊಡೆದು ಹಾಕಿ ಪ್ರಕ್ರಿಯೆಗಳ ವೇಗವನ್ನು ಹೆಚ್ಚಿಸಬೇಕಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಬದಲಾವಣೆಯ ಸವಾಲುಗಳನ್ನು ಎದುರಿಸಲು ಪ್ರಗತಿಯ ಜೊತೆಗೆ ರೂಪಾಂತರದ ಅಗತ್ಯವಿದೆ. ಆದ್ದರಿಂದ ಭಾರತದ ಕುರಿತು ನನ್ನ ದೃಷ್ಟಿಕೋನ ಕ್ಷಿಪ್ರ ಪರಿವರ್ತನೆಯಾಗಿದೆ ಎಂದು ಪ್ರಧಾನಿ ಮೊದಿ ಅವರು ನೀತಿ ಆಯೋಗ ಆಯೋಜಿಸಿದ್ದ ‘ಟ್ರಾಸ್ಫಾರ್ಮಿಂಗ್ ಇಂಡಿಯಾ’ದ ಮೊದಲ ಉಪನ್ಯಾಸದಲ್ಲಿ ನುಡಿದರು.
ಆಡಳಿತದಲ್ಲಿ ಪರಿವರ್ತನೆ ತರುವ ಮೂಲಕ ಬದಲಾವಣೆ ತರುವಲ್ಲಿ ಒತ್ತು ನೀಡಿದ ಅವರು, ಮನಸ್ಸು ರೂಪಾಂತರಗೊಳ್ಳದೇ ಆಡಳಿತದಲ್ಲಿ ಪರಿವರ್ತನೆಯಾಗದು. ಹಾಗೆಯೇ ಮನಸ್ಸಿನ ಪರಿವರ್ತನೆಗೆ ಪರಿವರ್ತಕ ಕಲ್ಪನೆಗಳು ಅಗತ್ಯ ಎಂದರು.
19ನೇ ಶತಮಾನದ ಆಡಳಿತ ವ್ಯವಸ್ಥೆಯ ಮೂಲಕ 21ನೇ ಶತಮಾನದಲ್ಲಿ ಮುನ್ನಡೆಯುವುದು ಅಸಾಧ್ಯ. ಬಾಹ್ಯ ಮತ್ತು ಆಂತರಿಕ ವ್ಯವಹಾರಗಳಲ್ಲಿ ಬದಲಾವಣೆಯಾಗಬೇಕಿದೆ. ಪ್ರತಿಯೊಂದು ದೇಶ ತನ್ನದೇ ಆದ ಅನುಭವ, ಶಕ್ತಿ ಹಾಗೂ ಸಂಪನ್ಮೂಲಗಳನ್ನು ಹೊಂದಿದೆ. ಪ್ರತಿಯೊಂದು ದೇಶ ಇತರ ದೇಶಗಳಗಳ ಮೇಲೆ ಅವಲಂಬಿತವಾಗಿದೆ. ಯಾವುದೇ ರಾಷ್ಟ್ರ ಪ್ರತ್ಯೇಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಒಂದು ರಾಷ್ಟ್ರವು ಜಾಗತಿಕ ಮಾನದಂಡಗಳಿಗೆ ಅನುಸಾರವಾಗಿ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಬೇಕು. ಇಲ್ಲವಾದರೆ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಭಾರತದಲ್ಲಿ ಸ್ಥಿರ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯ ಕಾರಣ ಪರಿವರ್ತನೆಗೆ ವಿಶೇಷ ಪ್ರಯತ್ನ ಮಾಡಬೇಕಿದೆ. ಜನರು ಪುಸ್ತಕಗಳು, ಲೇಖನಗಳನ್ನು ಓದುವ ಮೂಲಕ ಹೊಸ ಕಲ್ಪನೆಗಳನ್ನು ಪಡೆಯುತ್ತಾರೆ. ಪುಸ್ತಗಳು ನಮ್ಮ ಮನಸ್ಸಿನ ಕಿಟಕಿಯನ್ನು ತೆರೆಯುತ್ತವೆ. ನಮ್ಮ ಕಲ್ಪನೆಗಳನ್ನು ವಿವರಿಸದೇ ಇದ್ದಲ್ಲಿ ಅವು ನಮ್ಮ ಮನಸ್ಸಿನೊಳಗೆ ಸೀಮಿತಗೊಳ್ಳುತ್ತವೆ ಎಂದು ಈ ವೇಳೆ ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.