ನವದೆಹಲಿ: ದೀರ್ಘಕಾಲದ ತೆರಿಗೆ ಸುಧಾರಣೆಯ ಸರಕು ಮತ್ತು ಸೇವೆ (ಜಿಎಸ್ಟಿ) ಸಾಂವಿಧಾನಿಕ ಮಸೂದೆಗೆ ಸಂಸತ್ತು ಅನುಮೋದನೆ ನೀಡಿದೆ.
ಗ್ರಾಹಕನನ್ನು ‘ಒಡೆಯ’ನನ್ನಾಗಿಸುವ ಪ್ರಯತ್ನದೊಂದಿಗೆ ಭ್ರಷ್ಟಾಚಾರ ಮತ್ತು ಕಪ್ಪು ಹಣ ತಡೆಗಟ್ಟುವ ನಿರ್ಣಾಯಕ ಹಂತ ಇದಾಗಿದೆ ಎಂದು ಪ್ರದಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂವಿಧಾನದ (122ನೇ ತಿದ್ದುಪಡಿ) ಮಸೂದೆಯನ್ನು ೨೦೧೫ರಲ್ಲಿ ಲೋಕಸಭೆ ಅನುಮೋದನೆ ನೀಡಿತ್ತು. ಕಳೆದ ವಾರ ರಾಜ್ಯಸಭೆಯಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ಅಂಗೀಕರಿಸಲಾಗಿದ್ದು, ಇದರ ಅನುಮೋದನೆಗೆ ಮತ್ತೆ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಸರ್ಕಾರ ಶೇ.1ರಷ್ಟು ಹೆಚ್ಚುವರಿ ತೆರಿಗೆ ಕೈಬಿಡಿವುದು ಸೇರಿ 6 ಪ್ರಮುಖ ಬದಲಾವಣೆ ಮಾಡಿದ್ದು, ರಾಜ್ಯಸಭೆ ಅಂಗೀಕರಿಸಿತ್ತು.
ಜಿಎಸ್ಟಿ ತೆರಿಗೆಯನ್ನು ‘ಕನಿಷ್ಠ ಕಾರ್ಯಾತ್ಮಕ ದರ’ವಾಗಿ (minimum workable rate) ಇರಿಸಲಾಗುತ್ತಿದ್ದು, ಯಾವುದೇ ರಾಜ್ಯ ಸರ್ಕಾರಗಳು ಇದರ ಬದಲಾವಣೆ ಮಾಡಲು ಸಾಧ್ಯವಿಲ್ಲ. ತೆರಿಗೆ ದರವನ್ನು ಜಿಎಸ್ಟಿ ಮಂಡಳಿ ನಿರ್ಧರಿಸಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.