ತೆಲಂಗಾಣ : ತೆಲಂಗಾಣದ ಎಲ್ಲಾ ಮನೆಗಳಿಗೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಪೂರೈಸುವ ಮಹತ್ವದ ‘ಭಗೀರಥ’ ಯೋಜನೆ ಸೇರಿದಂತೆ ಒಟ್ಟು 5 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಮೇದಕ್ನ ಗಜವೆಲ್ ಕ್ಷೇತ್ರದ ಕೊಮಾಟಿಬಂಧ ಗ್ರಾಮದಲ್ಲಿ ‘ಭಗೀರಥ’ ಯೋಜನೆಗೆ ನೀರಿನ ಟ್ಯಾಪ್ನ್ನು ಓಪನ್ ಮಾಡುವ ಮೂಲಕ ಮೋದಿ ಚಾಲನೆ ನೀಡಿದರು. ಈ ಯೋಜನೆಯಿಂದ ಗಜವೆಲ್ನ 243 ಗ್ರಾಮಗಳಿಗೆ ಕುಡಿಯುವ ನೀರು ಸಿಗಲಿದೆ. ಈ ಯೋಜನೆಗೆ 42 ಸಾವಿರ ಕೋಟಿ ವ್ಯಯವಾಗಲಿದ್ದು, ಕೃಷ್ಣ – ಗೋದಾವರಿ ನದಿ, ಮತ್ತಿತ್ತರ ಜಲಾಶಯಗಳ ಕಾಲುವೆಗಳನ್ನು ಒಂದಕ್ಕೊಂದು ಜೋಡಿಸಿ ನೀರನ್ನು ಸಂಗ್ರಹಿಸಿ ಮತ್ತು ಸಂರಕ್ಷಿಸಿ ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತದೆ. ಇದಕ್ಕಾಗಿ 1.30 ಲಕ್ಷ ಕಿ.ಮೀ. ಪೈಪ್ ಲೈನ್ ಅಳವಡಿಸಲಾಗಿದೆ.
ಅಲ್ಲದೆ ಮೋದಿ ಕರೀನಗರ ಜಿಲ್ಲೆಯ ರಾಮಗುಂಡಂನಲ್ಲಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ವತಿಯಿಂದ 10,500 ಕೋಟಿ ರೂ. ವೆಚ್ಚದಲ್ಲಿ 1,600 ಮೆಗಾವ್ಯಾಟ್ ಉತ್ಪಾದಿಸುವ ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ಗೆ ಶಿಲಾನ್ಯಾಸ ಮಾಡಿದರು.
17 ವರ್ಷದ ಹಿಂದೆ ಮುಚ್ಚಲಾಗಿದ್ದು, ಇದೀಗ 5,250 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳ್ಳುತ್ತಿರುವ ರಾಮಗುಂಡಂ ಫರ್ಟಿಲೈಸರ್ ಪ್ಲಾಂಟ್ನ ಪುನರುಜ್ಜೀವನ ಶಿಲಾನ್ಯಾಸವನ್ನು ನೆರವೇರಿಸಿದರು.
ಹೈದರಾಬಾದ್ ಮತ್ತು ಕರೀಂನಗರವನ್ನು ಜೋಡಿಸುವ ಕೊತ್ತಪಳ್ಳಿ-ಮನಹೋರಾಬಾದ್ ರೈಲ್ವೆ ಲೈನ್ಗೂ ಶಿಲಾನ್ಯಾಸ ಮಾಡಿದರು. ಇದಕ್ಕೆ 1,100 ಕೋಟಿ ರೂ. ವ್ಯಯವಾಗಲಿದೆ.
8,000 ರೂ. ಹೂಡಿಕೆ ಮೂಲಕ ಸಿಂಗರೇನಿ ಕಲ್ಲಿದ್ದಲು ಸ್ಥಾಪಿಸಿದ 1,200 ಮೆಗಾವ್ಯಾಟ್ ಥರ್ಮಲ್ ಪವರ್ ಪ್ಲಾಂಟ್ನ್ನು ಅನಾವರಣಗೊಳಿಸಿದರು.
ವಾರಂಗಲ್ ಜಿಲ್ಲೆಯಲ್ಲಿ ಕಲೋಜಿ ನಾರಾಯಣರಾಜ್ ಯುನಿವರ್ಸಿಟಿ ಅಫ್ ಹೆಲ್ತ್ & ಸೈನ್ಸ್ನ್ನು ಮೋದಿಯವರು ಉದ್ಘಾಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.