ಈಶಾನ್ಯ ರಾಜ್ಯಗಳಿಂದ ಆರ್ಎಸ್ಎಸ್ ಮಕ್ಕಳನ್ನು ಸಾಗಣೆ ಮಾಡಿ ತಮ್ಮ ಸಿದ್ಧಾಂತವನ್ನು ಅವರ ಮೇಲೆ ಹೇರುತ್ತಿದೆ ಎಂದು ನೇಹಾ ದೀಕ್ಷಿತ್ ಎಂಬ ಪತ್ರಕರ್ತೆ ಔಟ್ಲುಕ್ನಲ್ಲಿ ಬರೆದ ಲೇಖನಕ್ಕೆ ಮೇಘಾಲಯದ ವಿದ್ಯಾರ್ಥಿಯೊಬ್ಬ ತಿರುಗೇಟು ನೀಡಿದ್ದಾನೆ.
ಮೇಘಾಲಯದ ಪಶ್ಚಿಮ ಗೋರೋ ಹಿಲ್ಸ್ನ ಡುಂಡುಮಾ ಗ್ರಾಮದ ನಿವಾಸಿಯಾದ ಬಿ.ಎ., ಎಂ.ಎಸ್. ವ್ಯಾಸಂಗ ಮಾಡುತ್ತಿರುವ ವೈಷ್ಣವ್ ಕೆ. ರೋಂಜಾ ಎಂಬಾತ ತನ್ನ ಲೇಖನದ ಮೂಲಕವೇ ಔಟ್ಲುಕ್ನಲ್ಲಿ ಪ್ರಕಟವಾದ ‘ಆಪರೇಷನ್ ಬೇಟಿ ಉಟಾವೋ’ ಲೇಖನದಲ್ಲಿನ ವಿವರಣೆಗಳನ್ನು ಕಟುವಾಗಿ ವಿರೋಧಿಸಿದ್ದಾನೆ.
ನೇಹಾ ಬರೆದ ಲೇಖನದ ಅಂಶಗಳು ತಿರುಚಲ್ಪಟ್ಟಿವೆ ಎಂದಿರುವ ಇವನು ಎಡಪಂಥೀಯ ಉಗ್ರವಾದದಿಂದ ಬಾಧಿತಗೊಂಡಿರುವ ಈಶಾನ್ಯ ಭಾಗದ ಬಗ್ಗೆ ಔಟ್ಲುಕ್ ಮತ್ತು ನೇಹಾ ಅವರಿಗೆ ಏನೂ ತಿಳಿದಿಲ್ಲ. ಅವರು ಮುಗ್ಧರು ಎಂದು ನನಗನಿಸುತ್ತಿದೆ ಎಂದು ಹೇಳಿದ್ದಾನೆ.
ಈಶಾನ್ಯದ ಮಕ್ಕಳನ್ನು ಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಆರ್ಎಸ್ಎಸ್ ಅಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ದೊಡ್ಡ ಕುಟುಂಬದಲ್ಲಿ ಜನಿಸಿದ ನನಗೂ ವಿದ್ಯಾಭ್ಯಾಸ ಮಾಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಆರ್ಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣವನ್ನು ಪಡೆದುಕೊಂಡಿದ್ದೇನೆ.
ಆರ್ಎಸ್ಎಸ್ ಬುಡಕಟ್ಟು ಜನಾಂಗದವರ ಶ್ರೇಯಾಭಿವೃದ್ಧಿಗಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಇದು ಯಾವುದೂ ನೇಹಾ ಅವರ ಕಣ್ಣಿಗೆ ಕಂಡಿಲ್ಲ. ಅವರು ಲೇಖನ ಬರೆಯುವ ಮೊದಲು ನನ್ನಂತಹ ಒಬ್ಬನನ್ನಾದರೂ ಸಂದರ್ಶಿಸಬೇಕಿತ್ತು ಎಂದಿದ್ದಾನೆ.
ಬುಡಕಟ್ಟು ಜನರನ್ನು ಅವಿದ್ಯಾವಂತರಾಗಿಯೇ ಇಟ್ಟು ಅವರ ಒಂದು ಕೈಯಲ್ಲಿ ಗನ್ ಮತ್ತೊಂದು ಕೈಯಲ್ಲಿ ಗ್ರೆನೇಡ್ ಇರಿಸುವುದು ಎಡ ಉಗ್ರರ ಉದ್ದೇಶ. ಇದೇ ರೀತಿಯ ಎಡಪಂಥೀಯ ಧೋರಣೆ ಹೊಂದಿರುವ ಔಟ್ಲುಕ್ ಮತ್ತು ನೇಹಾ ಅವರು ಸತ್ಯವನ್ನು ಮರೆಮಾಚಿ ಲೇಖನ ಪ್ರಕಟಿಸಿದ್ದಾರೆ.
ಕೆಲ ಕ್ರೈಸ್ತ ಸಂಘಟನೆಗಳು, ಎಡಪಂಥೀಯರು ನಡೆಸುತ್ತಿರುವ ದೇಶದ್ರೋಹದ ಕಾರ್ಯ, ಅಸ್ಥಿರತೆ, ಉಗ್ರವಾದ ಮತ್ತು ಮತಾಂತರದಂತಹ ಕೆಲ ಅಂಶಗಳನ್ನಾದರೂ ಇವರು ತಮ್ಮ ಆಪರೇಷನ್ ಬೇಟಿ ಉಟಾವೋ ಲೇಖನದಲ್ಲಿ ಉಲ್ಲೇಖಿಸಬಹುದಿತ್ತು ಎಂದಿದ್ದಾನೆ.
ಕೆಲವು ವಂಚಕ ಎನ್ಜಿಒಗಳ ಲೈಸೆನ್ಸ್ನ್ನು ಕೇಂದ್ರ ಇತ್ತೀಚೆಗೆ ರದ್ದುಗೊಳಿಸಿದೆ. ಇಂತಹ ಎನ್ಜಿಒಗಳೇ ನೇಹಾ ಅವರ ಲೇಖನಕ್ಕೆ ದೇಣಿಗೆ ನೀಡಿರಬಹುದು.
ರಾಷ್ಟ್ರೀಯತಾ ವಾದದ ಎನ್ಜಿಒಗಳು ಈಶಾನ್ಯ ಭಾಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳೇ ಇಂದು ಅಲ್ಲಿ ಉಗ್ರವಾದದ ನಿರ್ಮೂಲನೆಗೆ ಪ್ರಮುಖ ಕಾರಣವಾಗಿದೆ ಎಂದಿದ್ದಾನೆ.
ಅಲ್ಲದೆ ಈಶಾನ್ಯದ ಬುಡಕಟ್ಟ ಜನರ ಉನ್ನತಿಗೆ ನಿಮ್ಮ ಕೊಡುಗೆ ಏನು ? ನನ್ನ ಈ ಪ್ರಶ್ನೆಗೆ ಉತ್ತರಿಸಿ, ಇಲ್ಲವಾದಲ್ಲಿ ಕ್ಷಮೆ ಯಾಚನೆ ಮಾಡಿ ಎಂದು ಔಟ್ಲುಕ್ ಮತ್ತು ನೇಹಾ ಅವರಿಗೆ ನೇರ ಸವಾಲೊಡ್ಡಿದ್ದಾನೆ.
ನಮಗಾಗಿ ನೀವು ಏನನ್ನೂ ಮಾಡಿಲ್ಲ ಎಂದಾದ ಮೇಲೆ ಮಾಡಿದವರ ಬಗ್ಗೆ ಟೀಕಿಸುವ ಅಥವಾ ಅವರ ಕಾರ್ಯವನ್ನು ಹತ್ತಿಕ್ಕುವ ಅರ್ಹತೆ ನಿಮಗಿಲ್ಲ ಎಂದು ಹೇಳಿದ್ದಾನೆ.
ಔಟ್ಲುಕ್ ಲೇಖನದ ಕುರಿತು ಆರ್ಎಸ್ಎಸ್ ಕಾನೂನು ಹೋರಾಟ ನಡೆಸಲು ಚಿಂತಿಸುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.