ಕೋಲ್ಕತ್ತಾ : ಯಾವುದೇ ಒತ್ತಡವಿಲ್ಲದೆ ತಮ್ಮ ಕೆರಿಯರ್ನ್ನು ರೂಪುಗೊಳಿಸಬೇಕು ಎಂಬ ಉದ್ದೇಶದಿಂದ ಈ ಶೈಕ್ಷಣಿಕ ವರ್ಷದಿಂದ ಪಶ್ಚಿಮ ಬಂಗಾಳದ ಖರಗ್ಪುರ್ ಐಐಟಿ ನೂತನ ಯೋಜನೆಯೊಂದನ್ನು ಆರಂಭಿಸಿದೆ.
ಇತ್ತೀಚೆಗಷ್ಟೇ ಖರಗ್ಪುರ್ ಐಐಟಿಗೆ ನೀಡುವ ಅನುದಾನದಲ್ಲಿ ಕೇಂದ್ರ ಕಡಿತ ಮಾಡಿದೆ. ಇದನ್ನು ಸರಿತೂಗಿಸುವ ಸಲುವಾಗಿ ‘ಮೊದಲು ಓದಿ, ಗಳಿಸಿ ಬಳಿಕ ಹಣ ಪಾವತಿಸಿ’ (Learn-Earn-Return Fund) ಎಂಬ ನೂತನ ಯೋಜನೆಯೊಂದನ್ನು ಆರಂಭಿಸಿದೆ.
ಈ ಯೋಜನೆಯಡಿ ಆಸಕ್ತ ವಿದ್ಯಾರ್ಥಿಗಳು ಫೀಸ್ ವಿನಾಯಿತಿ ಪಡೆಯಲಿದ್ದಾರೆ. ಉದ್ಯೋಗ ಸಿಕ್ಕಿದ ಬಳಿಕ ಹಣ ಪಾವತಿಸುವ ಭರವಸೆ ನೀಡುವವರಿಗೆ ಮಾತ್ರ ಇದನ್ನು ನೀಡಲಾಗುತ್ತದೆ. ಉದ್ಯೋಗ ಸಿಕ್ಕಿದ ಬಳಿಕ ವರ್ಷಕ್ಕೆ 10,000 ಮರುಪಾವತಿ ಮಾಡುವಂತೆ ವಿದ್ಯಾರ್ಥಿಗಳಿಗೆ ನಾವು ಕೇಳಿಕೊಂಡಿದ್ದೇವೆ. ಹಳೇ ವಿದ್ಯಾರ್ಥಿಗಳು ಕನಿಷ್ಟ 30 ಸಾವಿರ ನೀಡಿದರೂ 30 ಕೋಟಿ ಹಣವನ್ನು ಸಂಗ್ರಹಿಸುವುದು ಸಾಧ್ಯವಾಗಲಿದೆ ಎಂದು ಖರಗ್ಪುರ್ ಐಐಟಿ ಮಂಡಳಿ ತಿಳಿಸಿದೆ.
ಈ ಹೊಸ ಯೋಜನೆಯಡಿ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿ ಅಥವಾ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿವೇತನವನ್ನು ನೀಡಲಿದೆ. ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದಾಖಲೆ ಮಾಡಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ವಿನಾಯಿತಿ ನೀಡಲಿದೆ ಎಂದು ಮಂಡಳಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.