News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅರುವ ಪ್ರಶಸ್ತಿ ಪ್ರಧಾನ ಸಮಾರಂಭ

Belthangady NEWSಬೆಳ್ತಂಗಡಿ : ಕನ್ನಡದಲ್ಲಿ ಶುದ್ಧ ಭಾಷೆ ಎಂಬುದಿದ್ದರೆ ಅದು ಯಕ್ಷಗಾನ ಮಾತ್ರವಾಗಿದ್ದು ಇದನ್ನು ಸರ್ಕಾರ ಪಠ್ಯವನ್ನಾಗಿ ತೆಗೆದು ಕೊಂಡು ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಜೊತೆಗೆ ಭಾಷೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ ಎಂದು ಶ್ರೀ ಕೇತ್ರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.

ಅವರು ಈಚೆಗೆ ಅಳದಂಗಡಿ ಜ್ಞಾನ ಮಾರ್ಗದಲ್ಲಿ ನಡೆದಶ್ರೀ ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ಇದರ ೮ನೇ ವರ್ಷದ ವಾರ್ಷಿಕೋತ್ಸವ ಮತ್ತು ೭ನೇ ವರ್ಷದ ಸಾರ್ವಜನಿಕ ಉಚಿತ ಶ್ರೀ ಶನೀಶ್ವರ ಪೂಜೆ ಹಾಗೂ ಅರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಶೀವರ್ಚನ ನೀಡುತ್ತಿದ್ದರು.ದೇಶದ ಭವಿಷ್ಯ ವ್ಯಕ್ತಿಯ ವ್ಯಕ್ತಿತ್ವದಲ್ಲಿ ತುಂಬಿ ಹೋಗಿದೆ. ಆ ಕೆಲಸವನ್ನು ಯಕ್ಷಗಾನ ಮಾಡುತ್ತಿದೆ ಯಕ್ಷಗಾನ ಸನಾತನ ಸಂಸ್ಕೃತಿಯನ್ನು ಮನೆ ಮನೆಗೆ ತಲುಪಿಸುವಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಆದುದರಿಂದ ಅರುವ ಪ್ರತಿಷ್ಠಾನ ಈ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಇಲ್ಲಿನ ಹೆಮ್ಮೆಯ ಯಕ್ಷಗಾನ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ ಜನಮಾನಸದಲ್ಲಿ ನೆನಪಲ್ಲಿ ಉಳಿಯುವ ಅನೇಕ ಕಾರ್ಯಕ್ರಮಗಳನ್ನು ಮುಂದೆಯೂ ನಡೆಸಲಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಸುನಂದ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಳದಂಗಡಿ ಗ್ರಾಮ ಪಂಚಾಯತಿನ ಅಧ್ಯಕ್ಷೆ ಭಾರತಿ ರವಿ ಬಂಗೇರ, ಮಾಜಿ ಜಿ.ಪಂ ಸದಸ್ಯ ಸುಂದರ ಸಾಲ್ಯಾನ್ ಶಿರ್ಲಾಲು ಉಪಸ್ಥಿತರಿದ್ದರು.

ಅರುವ ಪ್ರಶಸ್ತಿ ಪುರಸ್ಕೃತರು: ದಿ. ಮಾಧವ ಕಾಮತ್ ಸ್ಮರಣಾರ್ಥ ರಮೇಶ್ ಕಾಮತ್ ಉಡುಪಿ ಇವರ ವತಿಯಿಂದ ಖ್ಯಾತ ಸ್ತ್ರೀವೇಷ ದಾರಿ ಪುಂಡಾರಿಕಾಕ್ಷ ಉಪಾಧ್ಯಾಯ, ದಿ. ವಿಮಲ ಜೆ.ಶೆಟ್ಟಿ ಮಾವಿನಕಟ್ಟೆ ಸ್ಮರಣಾರ್ಥ ಜಯರಾಮ ಶೆಟ್ಟಿ ಮುಂಬಯಿ ಇವರಿಂದ ಖ್ಯಾತ ಯಕ್ಷಗಾನದ ಹಿರಿಯ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ, ದಿ.ರಮೇಶ್ ಪೈ ಸ್ಮರಣಾರ್ಥ ಅನಂತ ಪೈ ಸಹೋದರರು ವಾಮದಪದವು ಇವರಿಂದ ಅಳದಂಗಡಿಯ ಖ್ಯಾತ ವೈದ್ಯರಾದ ಡಾ.ಎನ್.ಎಂ ತುಳುಪುಳೆ ಹಾಗೂ ದಿ.ಗೋಪಾಲಕೃಷ್ಣ ಕಾಮತ್ ಮುಲ್ಕಿ ಇವರ ಸ್ಮರಣಾರ್ಥ ಜಗನ್ನಾಥ ಗೋಪಾಲ್ ಕಾಮತ್ ಮುಂಬಯಿ ಇವರಿಂದ ಪ್ರಖ್ಯಾತ ವಾಸ್ತುಶಿಲ್ಪಿ ಹಾಗೂ ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಶ್ರೀಧರ ಆಚಾರ್ಯ ಇವರಿಗೆ ಅರುವ ಪ್ರಶಸ್ತಿ ವಿತರಿಸಲಾಯಿತು.

ಉಬರಡ್ಕ ಉಮೇಶ್ ಶೆಟ್ಟಿ ಯಕ್ಷಗಾನ ಕಲಾವಿದರ ಅಭಿನಂದನಾ ಭಾಷಣ ಮಾಡಿದರು. ಪತ್ರಕರ್ತ ವಿಜಯ ಕುಮಾರ್, ಶಶಿಧರ ಶೆಟ್ಟಿ ಅಳದಂಗಡಿ ಸನ್ಮಾನ ಪತ್ರ ವಾಚಿಸಿದರು. ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ವತ್ಸಲಾ ಜೆ.ಭಂಡಾರಿ, ಜಗನ್ನಾಥ ಶೆಟ್ಟಿ ಸುಪ್ರಭಾತ ಆಲದಂಗಡಿ,ಜ್ಯೋತಿ ಭಂಡಾರಿ, ಶನೀಶ್ವರ ಪೂಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಸುವರ್ಣ, ದರ್ಶನ್ ಶೆಟ್ಟಿ, ಕಿರಣ್ ಕುಮಾರ್, ಭಾಗವಹಿಸಿದ್ದರು.

ಜಿತೇಂದ್ರ ಶೆಟ್ಟಿ ಕಾರ್ಯಾಣ ಪ್ರಾರ್ಥಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಕೆ.ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸಂತೋಷ್ ಸಿದ್ಧಕಟ್ಟೆ ಕಾರ್‍ಯಕ್ರಮ ನಿರ್ವಹಿಸಿದರು. ಶನೀಶ್ವರ ಪೂಜಾ ಸಮಿತಿ ಅಧ್ಯಕ್ಷ ಶಶಿಧರ ಎ.ಶೆಟ್ಟಿ ಧನ್ಯವಾದ ಸಲ್ಲಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top