ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜೋಹಾನ್ಸ್ಬರ್ಗ್ನ ‘ದ ಡೋಮ್’ನಲ್ಲಿ ಅದ್ದೂರಿ ಸ್ವಾಗತ ಪಡೆದರು.
ಅಲ್ಲಿಯ 15,000 ಭಾರತೀಯ ಜನಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದಕ್ಷಿಣ ಆಫ್ರಿಕಾ ಪ್ರವಾಸ ನನಗೆ ತುಂಬಾ ಖುಷಿ ತಂದಿದೆ. ಇಂದು ನೀವು ಬೋಸ್ಟಾನಾ ಮತ್ತಿತರ ಸ್ಥಳಗಳಿಂದ ನನ್ನನ್ನು ಭೇಟಿ ಮಾಡಲು ಬಂದಿದ್ದೀರಿ. ನನಗೆ ಸಿಕ್ಕ ಗೌರವ ಮನಸ್ಸಿಗೆ ಸಂತೋಷ ಕೊಟ್ಟಿದೆ ಎಂದು ಹೇಳಿದ್ದಾರೆ.
ನಾವು ಬೇರೆ ಬೇರೆ ಕಾಲಮಾನ ಹೊಂದಿರಬಹುದು, ನಮ್ಮ ಇತಿಹಾಸ ನಮ್ಮನ್ನು ಪ್ರತ್ಯೇಕಿಸಿರಬಹುದು ಹಾಗೂ ನಮ್ಮ ನೆಚ್ಚಿನ ಕ್ರಿಕೆಟ್ ತಂಡ ಬೇರೆ ಇರಬಹುದು. ಆದರೆ ನಮ್ಮ ಪರಂಪರೆ, ನಮ್ಮ ಹೃದಯಗಳು ಮತ್ತು ಮನಸ್ಸುಗಳು ನಮ್ಮನ್ನು ಒಂದುಗೂಡಿಸುತ್ತವೆ ಎಂದು ಮೋದಿ ಹೇಳಿದ್ದಾರೆ.
ಶತಮಾನಗಳ ಹಿಂದೆ ನಮ್ಮ ಪೂರ್ವಜರು ದಕ್ಷಿಣ ಆಫ್ರಿಕಾಕ್ಕೆ ಬಂದು ನೆಲೆಸಿ ಸಂಕಷ್ಟ, ಬಡತನ ಎದುರಿಸಿದರು. ಆದರೂ ಅವರು ಮುಂದುವರೆದರು. ಅವರು ಕೇವಲ ತಮ್ಮ ಸಂಪ್ರದಾಯ, ಸಂಸ್ಕೃತಿ, ಭಾಷೆಗಳನ್ನು ಸಂರಕ್ಷಿಸಿರುವುದು ಮಾತ್ರವಲ್ಲದೇ ಅವುಗಳ ಏಳಿಗೆಗೆ ಶ್ರಮಿಸಿದರು.
ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿಯವರ ಕಾರ್ಯಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಮಹಾತ್ಮ ಗಾಂಧಿಯವರು ತಮ್ಮ ರಾಜಕೀಯ ಪರಿಕಲ್ಪನೆಯನ್ನು ಇಲ್ಲಿಂದಲೇ ಆರಂಭಿಸಿದರು. ದಕ್ಷಿಣ ಆಫ್ರಿಕಾ ‘ಸತ್ಯಾಗ್ರಹ’ದ ಜನ್ಮಸ್ಥಳವಾಗಿದ್ದು, ಮೋಹನ್ದಾಸ್ ಅವರನ್ನು ‘ಮಹಾತ್ಮ’ರನ್ನಾಗಿ ಪರಿವರ್ತಿಸಿತು. ಇದು ಒಂದು ಪವಿತ್ರ ಭೂಮಿ. ಇದು ಮಂಡೇಲಾ ಮತ್ತು ಮಹಾತ್ಮ ಗಾಂಧಿಯವರ ‘ಕರ್ಮಭೂಮಿ’ಯಾಗಿದೆ ಎಂದರು.
ಭಾರತದ ಚೈತನ್ಯ ಕೇವಲ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಭಾರತದ ಸ್ಥಿತಿಸ್ಥಾಪಕತ್ವ, ನವೀಕೃತ ಬೆಳವಣಿಗೆ, ವೇಗ, ಸ್ಥಾನಮಾನವನ್ನು H.O.P.E – Harmony-ಸಾಮರಸ್ಯ, Optimism-ಆಶಾವಾದ, Potential- ಸಂಭಾವನೆ, Energy- ಶಕ್ತಿ ಎಂದು ವ್ಯಾಖ್ಯಾನಿಸಬಹುದು ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.