ಜೈಪುರ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಗಸ್ಟ್ 15 ರ ಒಳಗೆ ರಾಜಸ್ಥಾನದಲ್ಲಿ 5,000 ‘ಅನ್ನಪೂರ್ಣ ಭಂಡಾರಗಳನ್ನು ತೆರೆಯುವ ಗುರಿ ಹೊಂದಿದೆ. ಅನ್ನಪೂರ್ಣ ಭಂಡಾರಕ್ಕೆ ‘ವಿಲೇಜ್ ಮಾಲ್’ ಎಂದು ಹೆಸರಿಸಲಾಗಿದೆ.
ಕಳೆದ ಅಕ್ಟೋಬರ್ 2015 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯಡಿಯಲ್ಲಿ ಇದುವರೆಗೆ ಒಟ್ಟು 2018 ಮಾಲ್ಗಳನ್ನು ಸ್ಥಾಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ರೇಷನ್ ಅಂಗಡಿಗಳನ್ನು ಬಹು ಬ್ರ್ಯಾಂಡ್ಗಳ ವಸ್ತುಗಳನ್ನು ಹೊಂದಿದ ಚಿಲ್ಲರೆ ವ್ಯಾಪಾರ ಅಂಗಡಿಗಳನ್ನಾಗಿ ಪರಿವರ್ತಿಸಲಾಗಿದ್ದು, ಗ್ರಾಮೀಣ ಭಾಗದ ಗ್ರಾಹಕರಿಗೆ ರಿಯಾಯಿತಿ ದರಗಳಲ್ಲಿ ಉತ್ತಮ ಗುಣಮಟ್ಟದ ಸರಕುಗಳನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ನವೀನ ಪಿಪಿಪಿ ಮಾದರಿಯು ರಾಜ್ಯದಲ್ಲಿ ಪಿಡಿಎಸ್ನ್ನು ಆಧುನೀಕರಿಸುವ ಪ್ರಯತ್ನವಾಗಿದ್ದು, ಇದು ಪಿಡಿಎಸ್ ಮತ್ತು ಚಿಲ್ಲರೆ ವ್ಯಾಪಾರಗಳಿಗೆ ಲಾಭದಾಯಕವಾಗಲಿವೆ. ಗ್ರಾಹಕರಿಗೆ ದೈನಂದಿನ ಬಳಕೆಯ ಉತ್ಪನ್ನಗಳ ಆಯ್ಕೆ ಮೂಲಕ ಖರೀದಿಗೆ ಅವಕಾಶ ನೀಡಲಾಗುವುದು. ಈ ಯೋಜನೆಯಡಿ ಗ್ರಾಹಕರು ಮತ್ತು ಮಾರಾಟಗಾರರ ನಡುವೆ 60:40 ಅನುಪಾತದಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಡಾ. ಸುಬೋಧ್ ಅಗ್ರವಾಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.